ಅಧಿಕೃತವಾಗಿ ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ್ದೇನೆ; ಮಧು ಬಂಗಾರಪ್ಪ

ಬೆಂಗಳೂರುಅಧಿಕೃತವಾಗಿ ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ್ದೇನೆ. ಇಂದಿನಿಂದಲೇ ಕೆಲಸ ಮಾಡಲು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಭೇಟಿ ಮಾಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಿರಿಯರು, ಅವರು ಸಿಎಂ ಆಗಿದ್ದವರು, ನಮ್ಮ ತಂದೆನೋ ಸಿಎಂ ಆಗಿದ್ದವರು. ಹೀಗಾಗಿ ಅವರನ್ನ ಭೇಟಿಯಾಗಿದ್ದೇನೆ. ನಾಳೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿ ಮಾಡ್ತೀನಿ ಎಂದರು.

ದ್ರೋಹ ಮಾಡಿದ್ದಾರೆ ಎಂಬ ಹೆಚ್​.ಡಿ ಕುಮಾರಸ್ವಾಮಿ ಅವರ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಆ ಬಗ್ಗೆ ಏನು ಹೇಳೋದಿಲ್ಲ, ನನಗೆ ಅವರ ಬಗ್ಗೆ ವೈಯಕ್ತಿಕ ಗೌರವವಿದೆ. ಈ ಸಂದರ್ಭದಲ್ಲಿ ದೇಶಕ್ಕೆ ಕಾಂಗ್ರೆಸ್ ಅಗತ್ಯತೆ ಇದೆ. ನನ್ನ, ಕುಮಾರಸ್ವಾಮಿ ನಡುವೆ ವೈಯಕ್ತಿಕ ಸಿಟ್ಟಿಲ್ಲ, ಈಗ ಯಾವುದೇ ಚರ್ಚೆ ಬೇಡ. ಇವತ್ತು ಮನಸಾರೆ ಕಾಂಗ್ರೆಸ್​​ಗೆ ಹೋಗಿದ್ದೇನೆ ಎಂದಿದ್ದಾರೆ.

ಇನ್ನು ಚುನಾವಣೆ ಅನ್ನೋದು ಎಕ್ಸಾಂ ರೀತಿ, ಪಾಸ್ ಇಲ್ಲ ಫೇಲ್ ಎರಡೇ ಆಫ್ಶನ್. ಆದರೆ, ನಾಯಕತ್ವ ಎಂದೂ ಸೋಲುವುದಿಲ್ಲ, ನಾನು ಜೆಡಿಎಸ್​ನಲ್ಲಿ ಎಂದು ಅಧಿಕಾರ ಅನುಭವಿಸಿಲ್ಲ, ಕಾಂಗ್ರೆಸ್​ನಲ್ಲಿ ಬೆಳೆಯಲು ಅವಕಾಶವಿದೆ ಅದಕ್ಕೆ ಇಂದು ಸೇರ್ಪಡೆ ಆಗುತ್ತಿದ್ದೇನೆ. ಏಪ್ರಿಲ್ ತಿಂಗಳಲ್ಲಿ ಸಮಾವೇಶ ಮಾಡುತ್ತೇವೆ. ಲಕ್ಷಾಂತರ ಜನರನ್ನ ಸೇರಿಸುತ್ತೇನೆ ಎಂದು ಮಧು ಬಂಗಾರಪ್ಪ ಅವರು ಮಾತನಾಡಿದ್ದಾರೆ.

Exit mobile version