ಬೆಂಗಳೂರಿನ ಈ ಭಾಗಗಳಲ್ಲಿ ಜು. 17ರವರೆಗೆ ಕರೆಂಟ್‌ ವ್ಯತ್ಯಯ

Bengaluru

ಬೆಂಗಳೂರು, ಜು. 12: ಸಿಲಿಕಾನ್​ ಸಿಟಿ ಮಂದಿಗೆ ವಿದ್ಯುತ್​ ಸರಬರಾಜು ಬಗ್ಗೆ ಬೆಸ್ಕಾಂ ಮಹತ್ತರ ಆದೇಶವನ್ನು ಹೊರಡಿಸಿದೆ. ರಾಜಧಾನಿಯ ಆಯ್ದೆ ಭಾಗಗಳಲ್ಲಿ ಇಂದಿನಿಂದ ಶುಕ್ರವಾರ (ಜು.17) ರವರೆಗೆ ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇಂದಿನಿಂದ ಶುಕ್ರವಾರದವಗೆರೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಪವರ್​ ಕಟ್​ ಇರಲಿದೆ ಎಂದು ಬೆಸ್ಕಾಂ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಜಯನಗರ ಉಪ ವಿಭಾಗ, ನಂಜಪ್ಪ ಲೇಔಟ್​, ವಿನಾಯಕ ನಗರ, ಎಲೆಕ್ಟ್ರಾನಿಕ್​ ಸಿಟಿ, ಎಚ್​ಎಸ್​ಆರ್​ ಲೇಔಟ್​, ಮೈಲ್​ಸಂದ್ರ ಸೇರಿದಂತೆ ಹಲವು ಕಡೆ ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ತಾಂತ್ರಿಕ ಕಾರಣಗಳಿಂದ ಪವರ್​ ಕಿಟ್​ ಪ್ರಾಬ್ಲಂ ಇರಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿಕೊಂಡಿದೆ. ಈ ಭಾಗದ ಜನ ವಿದ್ಯುತ್​ ಸಂಬಂಧಿತ ನಿತ್ಯದ ಚಟುವಟಿಗಳನ್ನು ಬೆಳಗ್ಗೆ 10 ಗಂಟೆ ಒಳಗೆ ಹಾಗೂ ಸಂಜೆ 5 ಗಂಟೆ ಮೇಲೆ ಮಾಡಿಕೊಳ್ಳುವುದು ಒಳಿತು. ಈ ವಾರ ಪವರ್​ ಕಟ್​​ ಸಮಸ್ಯೆಗೆ ತಕ್ಕಂತೆ ಕೆಲಸಗಳನ್ನು ಮಾಡಿಕೊಳ್ಳುವುದು ಉತ್ತಮ. ಬೆಸ್ಕಾಂ ಮನವಿಗೆ ಸಹಕರಿಸಬೇಕು ಎಂದು ನಿಗಮ ಕೇಳಿಕೊಂಡಿದೆ.

Exit mobile version