ಅಹಮದಾಬಾದ್, ಮೇ. 04: ಐಪಿಎಲ್ನಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್.ರಾಹುಲ್ ಕರುಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎನ್ನಲಾಗಿದೆ. ಚಿಕಿತ್ಸೆ ನಂತರ ಅವರಿಗೆ ವಿಶ್ರಾಂತಿ ಅಗತ್ಯವಿರುವುದರಿಂದ ಅವರು ಐಪಿಎಲ್ನಿಂದ ಹೊರ ಉಳಿಯುವ ಸಾಧ್ಯತೆ ಇದೆ.
ಶನಿವಾರ ರಾತ್ರಿ ರಾಹುಲ್ಗೆ ಹೊಟ್ಟೆ ನೋವು ಕಾಣಿಸಿದ್ದು, ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಚಿಕಿತ್ಸೆಗೆ ಸ್ಪಂದಿಸಿಲ್ಲ. ತುರ್ತು ನಿಗಾ ಘಟಕದಲ್ಲಿ ಪರೀಕ್ಷಿಸಿದಾಗ ರಾಹುಲ್ ಅವರಿಗೆ ಕರುಳು ಸಂಬಂಧಿ ಕಾಯಿಲೆ (ಅಪೆಂಡಿಸೈಟಿಸ್) ಇರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೀಗಾಗಿ ಮುಂಬೈನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರಾಹುಲ್ ಅವರನ್ನು ದಾಖಲಿಸಲಾಗಿದ್ದು, ಭಾನುವಾರ ಶಸ್ತ್ರಚಿಕಿತ್ಸೆ ನಡೆಯುವ ಬಗ್ಗೆ ತಿಳಿಸಲಾಗಿತ್ತು. 10 ದಿನಗಳೊಳಗೆ ರಾಹುಲ್ ಚೇತರಿಸಿಕೊಂಡು ಐಪಿಎಲ್ಗೆ ಮರಳಬಹುದು ಎಂಬುದು ಪಂಜಾಬ್ ತಂಡದ ನಿರೀಕ್ಷೆಯಾಗಿದೆ. ರಾಹುಲ್ ಅನುಪಸ್ಥಿತಿಯಲ್ಲಿ ಮಾಯಂಕ್ ಅಗರ್ವಾಲ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ.