Bengaluru: ಪ್ರತಿಷ್ಠಿತ ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನದಿಂದ ಡಾ. ಮಂಜುನಾಥ್ರನ್ನು (Jayadeva hospital director termend) ರಾಜ್ಯ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದ್ದು, ನೂತನ
ನಿರ್ದೇಶಕರನ್ನು ಆಯ್ಕೆ ಮಾಡಲು ಮುಂದಾಗಿದೆ. ಡಾ. ಮಂಜುನಾಥ್ (Dr. Manjunath) ಅವರ ಅಧಿಕಾರವಧಿ ಮುಗಿದಿದ್ದರೂ, ಅತ್ಯುತ್ತಮ ಕಾರ್ಯನಿರ್ವಹಣೆಯಿಂದ ನಾಡಿನಾದ್ಯಂತ ಒಳ್ಳೆಯ
ಹೆಸರು ಗಳಿಸಿರುವ ಅವರನ್ನು ಹಿಂದಿನ ಸರ್ಕಾರ, ಆರು ತಿಂಗಳುಗಳ ಕಾಲ (Jayadeva hospital director termend) ಅವರನ್ನೇ ನಿರ್ದೇಶಕರನ್ನಾಗಿ ಮುಂದುವರೆಸಿತ್ತು.
ಇದೇ ಜನವರಿ 31ಕ್ಕೆ ಅವರ ಅಧಿಕಾರಾವಧಿ ಮುಗಿಯಲಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ (State Congress Govt) ಹೊಸ ನಿರ್ದೇಶಕರನ್ನು ಆಯ್ಕೆ ಮಾಡಲು ಮುಂದಾಗಿದೆ. ಆದರೆ
ಎನ್ಎಂಸಿ ಆಕ್ಟ್ (NMP Act) ಪ್ರಕಾರ 70 ವರ್ಷದವರೆಗೂ ಸೇವೆ ಸಲ್ಲಿಸಬಹುದಾಗಿದೆ.
ಡಾ. ಮಂಜುನಾಥ್ ಅವರಿಗೆ 67 ವರ್ಷವಾಗಿದ್ದು, ಇನ್ನು 3 ವರ್ಷಗಳ ಕಾಲ ಸೇವೆ ಸಲ್ಲಿಸಬಹುದಾಗಿದೆ. ಆದರೆ ರಾಜ್ಯ ಸರ್ಕಾರ ನೂತನ ನಿರ್ದೇಶಕರ ಆಯ್ಕೆ ಮಾಡಲು ಮುಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ (Chief Minister Siddaramaiah) ಆಪ್ತರಿಗೆ ನಿರ್ದೇಶಕರ ಹುದ್ದೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.
ಇನ್ನು ರಾಜ್ಯ ಸರ್ಕಾರ ಸೌಜನ್ಯಕ್ಕೂ ತಮಗೆ ಯಾವುದೇ ಮಾಹಿತಿ ನೀಡದೇ, ನಿರ್ದೇಶಕ ಹುದ್ದೆಗೆ ಅಧಿಸೂಚನೆ ಹೊರಡಿಸಿರುವುದು ಬೇಸರ ಮೂಡಿಸಿದೆ ಎಂದು ಡಾ. ಮಂಜುನಾಥ್ ಅವರು
ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ನಾಡಿನಾದ್ಯಂತ ಉತ್ತಮ ಹೆಸರು ಗಳಿಸಿರುವ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ (H D Devegowda) ಅಳಿಯರಾಗಿರುವ ಡಾ. ಮಂಜುನಾಥ್ ಅವರು ಮುಂಬರುವ ಲೋಕಸಭಾ
ಚುಣಾವಣೆಯಲ್ಲಿ ಹಾಸನ (Hassan) ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆ ಶುರುವಾಗಿತ್ತು. ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಾ.ಮಂಜುನಾಥ್ ಅವರು, ಆ ರೀತಿ ಏನಿಲ್ಲ
ಚುನಾವಣೆಗೆ ನಿಲ್ಲೊಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು (Shri Jayadeva Institute of Cardiovascular Sciences and Research) ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯಾಗಿದ್ದು,
ವಿಶೇಷವಾಗಿ ಹೃದಯ ಆರೈಕೆಗಾಗಿಯೇ 1600 ಹಾಸಿಗೆ ಸಾಮರ್ಥ್ಯವನ್ನು ಹೊಂದಿದೆ
ಮತ್ತು ಇದು ಆಗ್ನೇಯ ಏಷ್ಯಾದ ಅತಿದೊಡ್ಡ ಏಕೈಕ ಹೃದ್ರೋಗ ಚಿಕಿತ್ಸಾ ಕೇಂದ್ರವಾಗಿದೆ. (Asia’s largest single cardiology center) ಡಾ. ಮಂಜುನಾಥ್ ಅವರ ಅಧಿಕಾರವಧಿಯಲ್ಲಿ ಈ ಸಂಸ್ಥೆಯು
ಕಳೆದ 15 ವರ್ಷಗಳಲ್ಲಿ ಶೇ.500ರಷ್ಟು ಪ್ರಗತಿಯನ್ನು ದಾಖಲಿಸಿದೆ. ರಾಜ್ಯದ ಮೈಸೂರು, ಕಲಬುರಗಿಗಳಲ್ಲಿ (Mysore Kalaburgi) ನೂತನ ಕೇಂದ್ರಗಳನ್ನು ಸ್ಥಾಪಿಸಿದೆ. ಡಾ. ಮಂಜುನಾಥ್ ಅವರ
ನೇತೃತ್ವದಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿರುವ 12 ಕ್ಯಾತ್ಲ್ಯಾಬ್ಗಳು, 12 ಶಸ್ತ್ರಚಿಕಿತ್ಸಾ ಕೊಠಡಿಗಳು,
ನಾನ್-ಇನ್ವ್ಯಾಸೀವ್ ಪ್ರಯೋಗಾಲಯಗಳು ಮತ್ತು 24 ಗಂಟೆಗಳ ತುರ್ತು ಘಟಕವನ್ನು ಹೊಂದಿದೆ.
ಸಂಸ್ಥೆಯು 2015ರ ಸೆಪ್ಟೆಂಬರ್ ತಿಂಗಳಿನಲ್ಲಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದಿಂದ (Quality Council of India) ಎನ್ಎಬಿಹೆಚ್ ಮಾನತ್ಯೆಯನ್ನು ಪಡೆದುಕೊಂಡಿದೆ ಮತ್ತು ಇದು 2018 ರಲ್ಲಿ
ಎನ್ಎಬಿಹೆಚ್ (NABH) ಮರು ಮಾನ್ಯತೆ ಪಡೆದ ದೇಶದ ಮೊದಲ ಸಾರ್ವಜನಿಕ ಹೃದ್ರೋಗ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನು ಓದಿ: ಎಜುಕೇಷನಲ್ ಕನ್ಸಲ್ಟಂಟ್ ಇಂಡಿಯಾದಿಂದ ಪಿಜಿಟಿ ಶಿಕ್ಷಕರ ನೇಮಕ : 1,40,000 ವೇತನ