ಕಲಬುರಗಿಯ ದಂಪತಿಗಳ ಮಗುವಿಗೆ ‘ಪುನೀತ್ ರಾಜ್‌ಕುಮಾರ್’ ಎಂದು ನಾಮಕರಣ!

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಮ್ಮನೆಲ್ಲಾ ಅಗಲಿದರು. ತಾವು ಪ್ರೀತಿಸುವ ನೆಚ್ಚಿನ ಅಪ್ಪು ಅವರನ್ನು ಕಳೆದುಕೊಂಡು ಇಂದಿಗೂ ಪ್ರತಿದಿನ ಅಳುವವರ ಸಂಖ್ಯೆ ಅತೀವವಾಗಿದೆ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ದಿಢೀರ್ ನಿಧನವು ಚಿತ್ರರಂಗದ ಬಂಧುಬಳಗವನ್ನು ಏಕಾಏಕಿಬಕುಸಿಯುವಂತೆ ಮಾಡಿತು ಮತ್ತು ಪುನೀತ್ ರಾಜ್ ಕುಮಾರ್ ಅವರ ಕೋಟ್ಯಾಂತರ ಅಭಿಮಾನಿಗಳು ತಮ್ಮ ಪ್ರೀತಿಯ ‘ಅಪ್ಪು’ ಅವರನ್ನು ಕಳೆದುಕೊಂಡು ಶೋಕದ ಕಡಲಿನಲ್ಲಿದ್ದಾರೆ. ಪವರ್ ಸ್ಟಾರ್ ನಮ್ಮನೆಲ್ಲಾ ಅಗಲಿ ತಿಂಗಳುಗಳು ಕಳೆದಿದ್ದರೂ ಕೂಡ ಅವರ ಮೇಲಿರುವ ಪ್ರೀತಿ ಕಡಿಮೆಯಾಗದೆ ಮತ್ತಷ್ಟು, ಮಗದಷ್ಟು ಹೆಚ್ಚಾಗಿದೆ.

ಪ್ರತಿದಿನ ಅಪ್ಪು ಅವರ ಅಭಿಮಾನಿಗಳು ಒಂದಲ್ಲ 1ರೀತಿ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ವಾಸ್ತವವಾಗಿ, ಅವರ ನಿಧನದ ಸುದ್ದಿಯನ್ನು ಕೇಳಿದ ನಂತರ, ಅವರ ಕೆಲವು ಅಭಿಮಾನಿಗಳು ಸಹ ನಟನ ಸಾವನ್ನು ಸಹಿಸಲಾರದೆ ತಾವು ಆತ್ಮಹತ್ಯೆ ಮಾಡಿಕೊಂಡರು. ಇದೀಗ, ಪವರ್ ಸ್ಟಾರ್ ಅಪ್ಪು ಅವರ ಅಪಾರ ಅಭಿಮಾನಿಗಳಾಗಿರುವ ಉತ್ತರ ಕರ್ನಾಟಕದ ದಂಪತಿಗಳು ತಮ್ಮ ನವಜಾತ ಮಗುವಿಗೆ ಪುನೀತ್ ರಾಜ್‌ಕುಮಾರ್ ಎಂದೇ ಹೆಸರಿಸಿದ್ದಾರೆ.

ಹೌದು, ವರದಿಗಳ ಪ್ರಕಾರ, ಕಲಬುರಗಿ ನಿವಾಸಿಗಳಾದ ಸಿದ್ದು ಮತ್ತು ಕಾವೇರಿ ಎಂಬ ದಂಪತಿಗಳು ತಮಗೆ ಜನಿಸಿದ ಮಗನಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದು ಹೆಸರನ್ನು ಇಡಲು ಅವರು ಹುಟ್ಟುವ ಮೊದಲೇ ನಿರ್ಧರಿಸಿದ್ದರಂತೆ. ಈ ನಡುವೆ ಕೆಲವು ದಿನಗಳ ಹಿಂದೆ, ತಮ್ಮ ಮುಂಬರುವ ಚಿತ್ರ ‘ವಿಕ್ರಂ’ ಚಿತ್ರಿದ ಚಿತ್ರೀಕರಣಕ್ಕೆ ಎಂದು ಬೆಂಗಳೂರಿಗೆ ಭೇಟಿ ನೀಡಿದ್ದ ಸೂಪರ್‌ಸ್ಟಾರ್ ಕಮಲ್ ಹಾಸನ್, ರಮೇಶ್ ಅರವಿಂದ್ ಅವರೊಂದಿಗೆ ಪುನೀತ್ ರಾಜ್‌ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬ ಸದಸ್ಯರನ್ನು ಮಾತನಾಡಿಸಿ ಸಾಂತ್ವನ ಹೇಳಿದರು.

ಈ ನಡುವೆ ಕರ್ನಾಟಕದ ಪರಿಸರ ಮತ್ತು ಪರಿಸರ ವ್ಯವಸ್ಥೆಯ ಕುರಿತು ಮಾತನಾಡುವ ಅವರ ಕೊನೆಯ ಚಿತ್ರ ‘ಗಂಧದ ಗುಡಿ’ಯ ಟೀಸರ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಂಡಿತು. ಟೀಸರ್ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ಇದೇ ವರ್ಷ ಎಲ್ಲಾ ಥಿಯೇಟರ್‌ಗಳಲ್ಲಿ ತೆರೆಕಾಣಲಿದೆ ಎನ್ನಲಾಗಿದೆ. ಒಟ್ಟಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಅವರನ್ನು ಪ್ರೀತಿಸುವ ಜೀವಗಳು ಕೋಟಿಗೂ ಮೀರಿದೆ.

Exit mobile version