ದಯವಿಟ್ಟು ಶ್ಯಾಮ್ ರಂಗೀಲಾರಿಗೆ (Shyam Rangeela) ಓಟು ಹಾಕಿ. ಅವರಿಗೂ ಒಂದು ಅವಕಾಶ ಕೊಡಿ. ನಿಮ್ಮನಿರ್ಣಯದ ಬಗ್ಗೆ ಹೆಮ್ಮೆಯಿದೆ ಶ್ಯಾಮ್ ರಂಗೀಲಾ. ನೀವು ವಾರಣಾಸಿಯ ಜನಗಳಿಗೆ ಖಂಡಿತಾ ಮೋದಿಗಿಂತ ಪ್ರಾಮಾಣಿಕ ಸೇವೆ ಸಲ್ಲಿಸುತ್ತೀರೆಂಬ ನಂಬಿಕೆಯಿದೆ. ನಿಮಗೆ ಜಯವಾಗಲಿ ಎಂದು ಕನ್ನಡ ನಟ ಹಾಗೂ ಸಾಮಾಜಿಕ ಹೋರಾಟಗಾರ ಕಿಶೋರ್ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ದ ಸ್ಪರ್ಧಿಸುತ್ತಿರುವ ಕಮೀಡಿಯನ್ ಶ್ಯಾಮ್ ರಂಗೀಲಾರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ದಯವಿಟ್ಟು ಶ್ಯಾಮ್ ರಂಗೀಲಾರಿಗೆ ಓಟು ಹಾಕಿ. ಅವರಿಗೂ ಒಂದು ಅವಕಾಶ ಕೊಡಿ. ನಿಮ್ಮನಿರ್ಣಯದ ಬಗ್ಗೆ ಹೆಮ್ಮೆಯಿದೆ ಶ್ಯಾಮ್ ರಂಗೀಲಾ. ನೀವು ವಾರಣಾಸಿಯ ಜನಗಳಿಗೆ ಖಂಡಿತಾ ಮೋದಿಗಿಂತ ಪ್ರಾಮಾಣಿಕ ಸೇವೆ ಸಲ್ಲಿಸುತ್ತೀರೆಂಬ ನಂಬಿಕೆಯಿದೆ. ನಿಮಗೆ ಜಯವಾಗಲಿ.
ನೀವು ಸಂಸದರಾಗಿ ಜನಸೇವೆಗೆ ನಿಂತರೆ ನಾವು ನಿಮ್ಮ ಕಾಮಿಡಿ ಮಿಸ್ ಮಾಡಬಹುದೇನೊ. ಆದರೆ ಮೋದಿ ನೀವು ಬಿಟ್ಟ ಸ್ಥಾನ ತುಂಬಿ ನಿಮಗಿಂತ ಒಳ್ಳೆಯ ಕಮೀಡಿಯನ್ (Comedian) ಆಗಿ ನಮ್ಮನ್ನು ರಂಜಿಸುವುದರಲ್ಲಿ ನಮಗ್ಯಾವ ಅನುಮಾನವೂ ಇಲ್ಲ. ಅದರ ಸಾಧ್ಯತೆಗಳನ್ನು ಕಳೆದ 10 ವರ್ಷಗಳಲ್ಲಿ ದೇಶದ ಪ್ರಜೆಗಳೆಲ್ಲ ಕಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಇನ್ನೊಂದು ಪೋಸ್ಟ್ನಲ್ಲಿ ಪ್ರಧಾನಿ ಮೋದಿ (Modi) ಅವರ ವಿರುದ್ದ ಕಿಡಿಕಾರಿರುವ ಅವರು, ಧನ್ಯವಾದಗಳು ಮೋದಿಜೀ. ನಮ್ಮ ದುಡ್ಡಲ್ಲಿ ನಮಗೇ ಬಲವಂತವಾಗಿ ಚುಚ್ಚುಮದ್ದು ಕೊಟ್ಟು .. ಕೋವಿಡ್ ಕಾಲದ ಲಕ್ಷಾಂತರ ಸಾವುಗಳನ್ನು ಮುಚ್ಚಿಹಾಕಿ.. ನಮ್ಮ ದುಡ್ಡಿನ ವ್ಯಾಕ್ಸೀನ್ ಮಾಡಲು ಸಿರಮ್ ಇನ್ಸ್ಟಿಟ್ಯೂಟ್ (Serum Institute) ಕಡೆಯಿಂದ ಕೋಟಿಗಟ್ಟಲೆ ಚಂದಾ ಪಡೆದು .. ನಮ್ಮ ದುಡ್ಡಲ್ಲೇ ಪೋಸ್ಟರ್ ಹಾಕಿಸಿಕೊಂಡ ಕ್ರೆಡಿಟ್ಟು ನಿಮ್ಮದಾದರೆ, ಇದರ ಕ್ರೆಡಿಟ್ಟೂ ನಿಮ್ಮದೇ ಚಂದಾಮಾಮಾ.. ಅವರಂತೆ ನೀವು ಪುಕ್ಕಲುತನ ಸುಳ್ಳು ಬಿಟ್ಟು ಸತ್ಯ ಒಪ್ಪಿಕೊಳ್ಳುವುದು ಯಾವಾಗ?? ಎಂದು ಪ್ರಶ್ನಿಸಿದ್ದಾರೆ.