ಕೋವಿಡ್ ಆತಂಕ ಹಿನ್ನಲೆ ದಂಪತಿ ಆತ್ಮಹತ್ಯೆ

ಮಂಗಳೂರು ಆ 17 : ಕೋವಿಡ್ ತಗುಲಿದೆ ಎಂಬ ಆತಂಕದಿಂದ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಹೊರ ವಲಯದಲ್ಲಿ ನಡೆದಿದೆ.

ಕೋವಿಡ್ ತಗುಲಿದೆ ಎಂಬ ಶಂಕೆಯ ಹಿನ್ನಲೆಯಲ್ಲಿ ಪೊಲೀಸ್ ಕಮಿಷನರ್ ಅವರಿಗೆ ವಾಟ್ಸಪ್ ಮೂಲಕ ಧ್ವನಿ ಮುದ್ರಣ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿಗಳನ್ನು ರಮೇಶ್ ಸುವರ್ಣ ಮತ್ತು ಗೀತಾ ಸುಮರ್ಣ ಎಂದು ಗುರುತಿಸಲಾಗಿದೆ. ಕೋವಿಡ್ ಬಂದಿರುವ ಕಾರಣಕ್ಕೆ ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಎಂದು ನಗರ ಪೊಲೀಸ್ ಕಮಿಷನರ್ ಎನ್ ಶಿವಕುಮಾರ್ ಅವರಿಗೆ ಕಳುಹಿಸಿದ ಧ್ವನಿ ಮುದ್ರಣದಲ್ಲಿ ಅವರು ತಿಳಿಸಿದ್ದಾರೆ.

ಪೊಲೀಸ್ ಕಮಿಷನರ್ ಪುನಃ ಆ ವ್ಯಕ್ತಿಗೆ ಕರೆ ಮಾಡಿದರೂ ಆ ವ್ಯಕೆ ಕರೆ ಸ್ವೀಕರಿಸಲಿಲ್ಲ. ಆದರೂ ಕೂಡ ಧ್ವನಿ ಮುದ್ರಣ ಮೂಲಕ ಸಂದೇಶ ಕಳುಹಿಸಿದ್ದರು. ಜೊತೆಗೆ ಅವರ ಇರುವ ಸ್ಥಳವನ್ನು ಪತ್ತೆ ಹಚ್ಚಿ ಪೊಲೀಸರು ಹೋಗುವ ವೇಳೆಗೆ ಆ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದರು.

ರಮೇಶ್ ಸುವರ್ಣ ಅವರ ಪತ್ನಿ ಗುಣ ಸುಮರ್ಣ ಅವರು ಡೆತ್ ನೋಟ್ ಬರದಿಟ್ಟಿದ್ದು ಅದರಲ್ಲಿ ನಮ್ಮ ಅಂತ್ಯ ಸಂಸ್ಕಾರಕ್ಕೆ 1 ಲಕ್ಷಹಣವನ್ನು ಇಟ್ಟಿದ್ದು, ನಮ್ಮ ಅಂತ್ಯ ಸಂಸ್ಕಾರವನ್ನು ಸತ್ಯಜಿತ್ ಸುರತ್ಕಲ್ ಮತ್ತು ಶರಣ್ ಪಂಪ್ವೆಲ್ ನೆರವೇರಿಸಬೇಕೆಂದು ಬರೆದಿದ್ದಾರೆ.

Exit mobile version