ಬೆಂಗಳೂರು, ಡಿ. 20: ‘ಬಿಟ್ಟಿ ಸಿಕ್ರೆ ನನಗೂ ಇರ್ಲಿ, ಮನೆಯವರಿಗೂ ಇರ್ಲಿ’ ಅನ್ನೋ ಜನರೇ ಹೆಚ್ಚು. ಸಿಕ್ಕವರಿಗೆ ಸೀರುಂಡೆ ಎನ್ನೋ ಘಟನೆಗೆ ರಾಜ್ಯ ರಾಜಧಾನಿ ಬೆಂಗಳೂರು ಸಾಕ್ಷಿಯಾಯಿತು. ಸರಣಿ ಅಪಘಾತದಲ್ಲಿ ಮದ್ಯ ತುಂಬಿದ ಲಾರಿ ಪಲ್ಟಿಯಾಗಿ ಕೈಗೆ ಸಿಕ್ಕ ಮದ್ಯ ಬಾಟಲಿಗಳನ್ನು ಜನರು ದೋಚಿದ ಪ್ರಸಂಗಕ್ಕೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಮಾಗಡಿ ರಸ್ತೆಯ ಸೀಗೆಹಳ್ಳಿ ಗೇಟ್ ಬಳಿ ವೇಗವಾಗಿ ಚಲಿಸುತ್ತಿದ್ದ ವಾಹನಗಳು ಸರಣಿ ಅಪಘಾತಕ್ಕೀಡಾದವು. ಲಾರಿ, ಟ್ರಕ್ ಮತ್ತು ಕ್ರೇನ್ ಒಂದಕ್ಕೊಂದು ಅಪಘಾತಕ್ಕೀಡಾಗಿದೆ. ಈ ಸಮಯದಲ್ಲಿ ಮದ್ಯ ತುಂಬಿದ ಲಾರಿ ಉರುಳಿ ಬಿದ್ದಿದೆ.
ಅಪಘಾತವಾದ ಕೂಡಲೇ ಚಾಲಕ ಮತ್ತು ಕ್ಲೀನರ್ ಗೆ ಏನಾಗಿದೆಯೊ ಅಂತ ಅವರನ್ನು ರಕ್ಷಿಸುವ ಗೋಜಿಗೆ ಹೋಗದ ಜನರು ಕೈಗೆ ಸಿಕ್ಕ ಮದ್ಯದ ಬಾಟಲಿಗಳನ್ನು ಸಿಕ್ಕಿದ್ದು ಸೀರುಂಡೆ ಎಂಬಂತೆ ಹೊತ್ಯೋಯ್ದಿದ್ದಾರೆ.
ಈ ಘಟನೆ ಸಂಬಂಧ ತಾವರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದ್ಯ ಬಾಟಲಿ ಕದ್ದವರನ್ನು ಪೊಲೀಸರೇನಾದರೂ ಈಗ ಹಿಡಿಯಲು ಹೋದರೆ ಅವರೆಲ್ಲಾ ಸಖತ್ ಆಗಿ ಮದ್ಯ ಹೀರಿ ನಶೆಯಲ್ಲಿ ತೇಲಾಡುತ್ತಿರುತ್ತಾರೆ.