Bengaluru: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ನಮ್ಮ ಮೆಟ್ರೋ (Namma Metro) ಮಾರ್ಗ (Metro impact on BMTC) ವಿಸ್ತರಣೆಯಿಂದ ಹೊಡೆತ ಬೀಳುತ್ತಿದ್ದು, ನಗರದ ಮೂಲೆ
ಮೂಲೆಗೂ ಬಿಎಂಟಿಸಿ ಬಸ್ಗಳು (Bus) ಸಂಪರ್ಕ ಕಲ್ಪಿಸುತ್ತವೆ. ಮೊದಲು ದೂರದ ಪ್ರಯಾಣಕ್ಕಾಗಿ ಜನರು ಬಿಎಂಟಿಸಿಯನ್ನು ಅವಲಂಬಿಸಿದ್ದರು. ಆದರೆ ಇದೀಗ ನಮ್ಮ ಮೆಟ್ರೋ ಮಾರ್ಗ
ವಿಸ್ತರಣೆಯಾಗುತ್ತಿರುವುದರಿಂದ ದೂರದ ಪ್ರಯಾಣ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಬಿಎಂಟಿಸಿ ಕಲೆಕ್ಷನ್ಗೆ ಹೊಡೆತಬೀಳಲಿದೆ.
ಇತ್ತೀಚಿನ ಬಿಎಂಟಿಸಿಯ (BMTC) ವಿಶ್ಲೇಷಣೆಯ ಪ್ರಕಾರ ಶೇ 50 ಕ್ಕಿಂತ ಹೆಚ್ಚಿನ ಪ್ರಯಾಣಿಕರು ಕೇವಲ 4 ಕಿಮೀ ಪ್ರಯಾಣಿಸಲು ಬಸ್ಗಳಲ್ಲಿ ಸಂಚರಿಸುತ್ತಿದ್ದು, ಶೇ 80 ರಷ್ಟು ಜನ ಪ್ರಯಾಣಿಕರು 10 ಕಿಮೀ
ಅಥವಾ ಅದಕ್ಕಿಂತ ಕಡಿಮೆ ಪ್ರಯಾಣಿಸಲು ಬಸ್ಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ (Times Of India) ವರದಿ ಮಾಡಿದೆ.
ನೇರಳೆ ಮಾರ್ಗವು ಮೊದಲು ಕೆಂಗೆರಿಯಿಂದ (Kengeri) ಬೈಯಪ್ಪನಹಳ್ಳಿವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಕಾಡುಗೋಡಿ (ವೈಟ್ಫೀಲ್ಡ್)ಗೆ ತೆರಳುವ ಜನರು ಬೈಯಪ್ಪನಹಳ್ಳಿಯಲ್ಲಿ (Baiyappanahalli)
ಇಳಿದುಕೊಂಡು ಬಿಎಂಟಿಸಿ ಬಸ್ನಲ್ಲಿ (Metro impact on BMTC) ಹೋಗುತ್ತಿದ್ದರು.
ಪ್ರಯಾಣದ ದೂರ 15 ಕಿಮೀ ಆಗಿದ್ದು, ಆದರೆ ಇದೀಗ ಚಲ್ಲಘಟ್ಟದಿಂದ (Challaghatta) ಕಾಡುಗೋಡಿಗೆ (ವೈಟ್ಫೀಲ್ಡ್) ಸಂಪೂರ್ಣ ನೇರಳೆ ಮಾರ್ಗವು ಕಾರ್ಯಾರಂಭ ಮಾಡಿದೆ. ಇದರಿಂದ ಬಿಎಂಟಿಸಿ
ಬಸ್ನಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಟಿಕೆಟ್ ಕಲೆಕ್ಷನ್ಗೆ ಪೆಟ್ಟು ಬಿದ್ದಿದೆ.
ಜನರು ಹೊಸ ಮಾರ್ಗ ಆರಂಭವಾಗಿದ್ದರಿಂದ ದೂರದ ಪ್ರಯಾಣಕ್ಕಾಗಿ ಮೆಟ್ರೊ ಅವಲಂಬಿಸಿದ್ದಾರೆ ಮತ್ತು ಕಡಿಮೆ ದೂರದ ಪ್ರಯಾಣಕ್ಕಾಗಿ ಬಿಎಂಟಿಸಿ ಬಸ್ಗಳನ್ನು ಬಳಸುತ್ತಿದ್ದಾರೆ. ನಾವು ಎರಡೂ
ಸಾರ್ವಜನಿಕ ಸಾರಿಗೆಗಳು ಒಂದಕ್ಕೊಂದು ಪೂರಕವಾಗುವಂತೆ ಫೀಡರ್ ಸೇವೆಗಳನ್ನು ನಡೆಸುವುದರ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಅಗತ್ಯವಿರುವ ಮಾರ್ಗಗಳಲ್ಲಿ ಹೆಚ್ಚಿನ ಬಸ್ಗಳನ್ನು ಓಡಿಸಲು
ಚಿಂತಿಸುತ್ತಿದ್ದೇವೆ ಎಂದು ಈ ಕುರಿತು ಬಿಎಂಟಿಸಿ ಅಧಿಕಾರಿ ವಿಶ್ವನಾಥ್ ಕೆಆರ್ (Vishwanathan K R ) ಅವರು ಹೇಳಿದರು.
ಇದನ್ನು ಓದಿ: ಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣದ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಭವ್ಯಶ್ರೀ ಆರ್ .ಜೆ