ಮತಾಂಧ ಧಾರ್ಮಿಕ ಶಿಕ್ಷಣಕ್ಕೆ ಬೀಳಬೇಕಿದೆ ಕಡಿವಾಣ

Arif Khan

ಕನ್ಹಯ್ಯಾ ಲಾಲ್(Kannaiah Lal) ಎಂಬ ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಮೂಲಭೂತವಾದಿಗಳು ಭೀಕರವಾಗಿ ರುಂಡ ಕತ್ತರಿಸಿ ಹತ್ಯೆ ಮಾಡಿದ್ದಾರೆ. ಈ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಆದರೆ ಈ ರೀತಿ ರುಂಡ ಕತ್ತರಿಸಿ ಹತ್ಯೆ ಮಾಡುವ ಮನಸ್ಥಿತಿಗಳ ಹಿಂದಿರುವ ಕಾರಣಗಳ ಕುರಿತು ಚರ್ಚೆ ನಡೆಯುತ್ತಿಲ್ಲ. ಎಲ್ಲ ಧರ್ಮಗಳಲ್ಲೂ ಮೂಲಭೂತವಾದಿಗಳಿದ್ದಾರೆ. ಆದರೆ ಮುಸ್ಲಿಂ ಮೂಲಭೂತವಾದಿಗಳಲ್ಲಿರುವ ಭೀಕರತೆ ಬೇರೆ ಯಾವ ಧರ್ಮದಲ್ಲೂ ಕಂಡು ಬರುವುದಿಲ್ಲ.


ಈ ರೀತಿಯ ಅಮಾನವೀಯ ಹತ್ಯೆಗಳಿಗೆ ಮದರಸಾಗಳಲ್ಲಿ ಬೋಧಿಸಲಾಗುತ್ತಿರುವ ಧಾರ್ಮಿಕ ಶಿಕ್ಷಣವೇ ಕಾರಣ ಎಂದು ಕೇರಳ ರಾಜ್ಯಪಾಲ(Kerala Governer) ಮೊಹಮ್ಮದ ಆರಿಫ್ ಖಾನ್(Mohammud Arif Khan) ಹೇಳಿರುವ ಮಾತು ಅಕ್ಷರಶಃ ಸತ್ಯ. ಮುಸ್ಲಿಂ ಮಕ್ಕಳಿಗೆ ಬಾಲ್ಯದಿಂದಲೇ ಮತಾಂಧ ಧಾರ್ಮಿಕ ಶಿಕ್ಷಣವನ್ನು ಬೋಧಿಸಲಾಗುತ್ತದೆ. ಧಾರ್ಮಿಕ ಶಿಕ್ಷಣ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸುತ್ತದೆ. ಆಧುನಿಕ ಶಿಕ್ಷಣದಿಂದ ವಂಚಿತರಾದ ಮಕ್ಕಳು, ಧಾರ್ಮಿಕ ಮೂಲಭೂತವಾದದಿಂದ ಪ್ರೇರಣೆ ಪಡೆಯುತ್ತಾರೆ.

ಈ ರೀತಿಯ ಮಕ್ಕಳು ಭಾರತದ ಬಹುಸಂಸ್ಕøತಿಯ ಸಮಾಜದಲ್ಲಿ ಸಹಬಾಳ್ವೆ ನಡೆಸಲು ಯೋಗ್ಯರಲ್ಲ. ‘ಒಂದೇ ಧರ್ಮ, ಒಬ್ಬನೇ ದೇವರೆಂದು’ ಪ್ರತಿದಿನ ಈ ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬಿತ್ತುವ ಮೂಲಕ, ಬಹುಸಂಸ್ಕೃತಿಯ ಮತ್ತು ಬಹುದೇವರಾಧನೆಯ ಈ ಸಮಾಜವನ್ನು ಒಡೆಯಲು ಪ್ರೇರೆಪಿಸಲಾಗುತ್ತದೆ. ಹೀಗಾಗಿಯೇ ಈ ರೀತಿಯ ಹತ್ಯೆಗಳನ್ನು ಮಾಡಲಾಗುತ್ತದೆ. ಸರ್ಕಾರ ಮದರಸಾ ಶಿಕ್ಷಣ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ.

ಮದರಸಾ ಶಿಕ್ಷಣದ ಕುರಿತು ಮರುಪರಿಶೀಲನೆ ಮಾಡುವ ತುರ್ತು ಅಗತ್ಯವಿದೆ. ಇಲ್ಲದಿದ್ದರೆ ಈ ರೀತಿಯ ಧಾರ್ಮಿಕ ಹತ್ಯೆಗಳಿಗೆ ಮದರಸಾ ಶಿಕ್ಷಣ ಮುಖ್ಯ ನೆಲೆಯಾಗಲಿದೆ. ಈಗಾಗಲೇ ಅನೇಕ ದೇಶಗಳಲ್ಲಿ ಮದರಸಾ ಶಿಕ್ಷಣವನ್ನು ನಿಷೇಧಿಸಲಾಗಿದೆ. ಮುಸ್ಲಿಂ ಮಕ್ಕಳಿಗೆ ಮದರಸಾ ಶಿಕ್ಷಣಕ್ಕಿಂತ ಆಧುನಿಕ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ. ಸರ್ಕಾರಗಳು ಮುಸ್ಲಿಂ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡುವತ್ತ ಹೆಚ್ಚಿನ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ.

Exit mobile version