ಡಾ. ರಾಜ್ ಮತ್ತು ಪುನೀತ್ ರಾಜ್ ಕುಮಾರ್ ಅನೇಕ ಸಾಮಾಜಿಕ ಕಳಕಳಿ ಇರುವ ವ್ಯಕ್ತಿಗಳು. ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗಬಾರದು ಎಂಬ ಮಾತಿಗೆ ಅಕ್ಷರಶಃ ಒಂದುಕೊಳ್ಳುವಂತೆ ನಡೆದುಕೊಂಡವರು. ಅಂದು ನಂದಿನ ಹಾಲಿನ ಜಾಹೀರಾತು ರಾಯಭಾರಿಯಾಗಿದ್ದ ಡಾ. ರಾಜ್ ಒಂದು ನಯಾಪೈಸೆ ತೆಗೆದುಕೊಳ್ಳದೆ ರೈತ ಪರನಿಂತಿದ್ದರು. ತಂದಯೇ ದಾರಿಯಲ್ಲೆ ನಡೆದ ಅಪ್ಪು ಕೂಡ ಒಂದು ರೂಪಾಯನ್ನು ಸಹ ತಗೆದುಕೊಳ್ಳದೆ ನಂದಿನಿ ಹಾಲಿನ ರಾಯಭಾರಿಯಾಗಿ ಜಾಹೀರಾತು ಮಾಡಿದರು. ಆದರೆ ಪ್ರಸ್ತುತವಾಗಿ ಅವರು ನಮ್ಮನ್ನಗಲಿದ್ದಾರೆ ಎಂಬುದು ನಂಬಲಾರದ ಸತ್ಯ.
ವರನಟನನ್ನು ಭೇಟಿಯಾಗಿ ಜಾಹೀರಾತು ಮಾಡಲು ನಂದಿನಿ ಸಂಸ್ಥೆ ಕೇಳಿಕೊಂಡಿತು. ಸಂಸ್ಥೆಯ ಮಾತಿಗೆ ಓಗೊಟ್ಟ ಡಾ.ರಾಜ್, ಅದೇ ಮೊದಲ ಬಾರಿಗೆ 1996ರಲ್ಲಿ ಒಂದು ರೂಪಾಯಿನ್ನು ಕೂಡಾ ಪಡೆಯದೇ ನಂದಿನಿ ಹಾಲಿನ ರಾಯಭಾರಿಯಾಗಿ ದೂರದರ್ಶನದಲ್ಲಿ ಜಾಹೀರಾತು ಮಾಡಿದರು.
ವಿಶೇಷವೆಂದರೆ ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಸಂಸ್ಥೆಗೆ ಜಾಹಿರಾತು ನೀಡದ ಮೇರು ನಟ KMFನ ಸದುದ್ದೇಶಕ್ಕೆ ಮಾರುಹೋಗಿ ಇದೇ ಮೊದಲ ಬಾರಿಗೆ ನಂದಿನಿ ಜಾಹಿರಾತಿನಲ್ಲಿ ಕಾಣಿಸಿಕೊಂಡರು. ಇದು ರೈತರ ಮೇಲೆ ಅವರಿಗೆ ಇರುವ ಕಾಳಜಿ ತೋರುತ್ತದೆ.
ಡಾ. ರಾಜಕುಮಾರ್ ಅವರ ನಂತರ ಅವರ ಮಗನಾದ ಪುನೀತ್ ರಾಜ್ಕುಮಾರ್ ತಂದೆಯೆಂತೆಯೇ ಅವರು ಕೂಡ ಒಂದು ರೂಪಾಯನ್ನು ಸಹ ತಗೆದುಕೊಳ್ಳದೆ. 2009ರಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ಜಾಹೀರಾತು ಮಾಡಿದರು. ಡಾ. ರಾಜ್ ಮತ್ತವರ ಪುತ್ರ ಪುನೀತ್ ಇಬ್ಬರೂ ರೈತರ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಸಹಾನುಭೂತಿಯುಳ್ಳ ವ್ಯಕ್ತಿಗಳು ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ ಸಂದರ್ಭ ಇದು.
ಕಳೆದ ವರ್ಷ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಚೆಲುವ ಚಾಮರಾಜನಗರದ ರಾಯಭಾರಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಂದೇಶ ಇರುವ ” ಹುಲಿಗಳ ನಾಡು ” ಚಾಮರಾಜನಗರ ಎಂಬ ಪ್ರಮೋಷನ್ ವಿಡಿಯೋವೊಂದನ್ನು ಜಿಲ್ಲಾಡಳಿತ ಸಿದ್ದಪಡಿಸಿ ಬಿಡುಗಡೆ ಮಾಡಿತ್ತು.
ಜಿಲ್ಲೆಯ ಪರಿಸರ , ಧಾರ್ಮಿಕ, ಆಧ್ಯಾತ್ಮ ,ಪ್ರವಾಸೋದ್ಯಮ, ಸಾಹಸ ಹಾಗೂ ಪಾರಂಪರಿಕ ಪ್ರವಾಸಿ ತಾಣಗಳ ಸೌಂದರ್ಯ ಅನಾವರಣಗೊಳಿಸುವ ಈ ವಿಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಯಾವುದೇ ರೀತಿಯ ಸಂಭಾವನೆ ಪಡೆಯದೆ ಸಂದೇಶ ನೀಡುವ ಮೂಲಕ ತವರು ಜಿಲ್ಲೆಯ ಅಭಿವೃದ್ಧಿಗೆ ಸಾಥ್ ನೀಡಿದ್ದರು.