Jaipur (Rajasthan) : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿರುವ (Narendra Modi Against Congress) ಹೇಳಿಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಪ್ರಧಾನಿ
ನರೇಂದ್ರ ಮೋದಿ ಅವರು, ಕಾಂಗ್ರೆಸ್ ಪಕ್ಷದ ವಿರುದ್ದ ʼಮಂಗಳಸೂತ್ರʼ ಅಸ್ತ್ರ ಪ್ರಯೋಗಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಮರುಹಂಚಿಕೆ ಮಾಡುವ ನೆಪದಲ್ಲಿ, ಹಿಂದೂ ತಾಯಂದಿರ
ಮಂಗಳಸೂತ್ರವನ್ನು ಮುಸ್ಲಿಂಮರಿಗೆ ಹಂಚಿಕೆ ಮಾಡುವ ದುರುದ್ದೇಶ (Narendra Modi Against Congress) ಹೊಂದಿದೆ ಎಂದು ಆರೋಪಿಸಿದ್ದಾರೆ.
ರಾಜಸ್ಥಾನದಲ್ಲಿ (Rajasthan) ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಕಾಂಗ್ರೆಸ್ನವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಸಾಮಾನ್ಯ ಜನರ ಬಳಿ ಇರುವ ಎಲ್ಲವನ್ನೂ
ತನಿಖೆ ಮಾಡಿ ಮತ್ತು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಂಡು, ಇತರರಿಗೆ ಹಂಚಲಾಗುವುದು ಎಂದು ಹೇಳುತ್ತಾರೆ. ನಮ್ಮ ಕುಟುಂಬದ ಮಹಿಳೆಯರು ಕೇವಲ ಸಮಾರಂಭಗಳಲ್ಲಿ ಧರಿಸಲು ಮಾತ್ರವಲ್ಲದೆ
‘ಸ್ತ್ರೀಧನ’ ಎಂಬ ಕಾನೂನುಬದ್ಧ ಹಕ್ಕನ್ನು ಹೊಂದಿರುವ ಚಿನ್ನಾಭರಣಗಳನ್ನು ಕುಡಿಟ್ಟುಕೊಂಡಿರುತ್ತಾರೆ. ಕಾಂಗ್ರೆಸ್ನವರು (Congress) ನಮ್ಮ ತಾಯಂದಿರು ಮತ್ತು ಸಹೋದರಿಯರಿಂದ ಅವರ ‘ಮಂಗಲಸೂತ್ರ’
ಸೇರಿದಂತೆ ಎಲ್ಲ ಚಿನ್ನವನ್ನು ಕಸಿದುಕೊಳ್ಳಲು ಕಾನೂನನ್ನು ತಿದ್ದುಪಡಿ ಮಾಡಲು ಯೋಜಿಸಿದ್ದಾರೆ, ಅದನ್ನು ಕದಿಯಲು ಮುಂದಾಗಿದ್ದಾರೆ ಎಂದು ಮೋದಿ ಟೀಕಿಸಿದ್ದಾರೆ.
ಇನ್ನು ಉತ್ತರಪ್ರದೇಶದ ಅಲಿಗಢ ಲೋಕಸಭಾ ಕ್ಷೇತ್ರದ ಚುನಾವಣೆಯ ಎರಡನೇ ಹಂತದಲ್ಲಿ ಏಪ್ರಿಲ್ (April) 26 ರಂದು ಮತದಾನ ನಡೆಯಲಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ
ಪಕ್ಷದ ಅಲಿಘರ್ ಅಭ್ಯರ್ಥಿ ಮತ್ತು ಹಾಲಿ ಸಂಸದ ಸತೀಶ್ ಗೌತಮ್ (Satish Gowtham) ಮತ್ತು ಹತ್ರಾಸ್ ಮೀಸಲು ಕ್ಷೇತ್ರದ ಅನುಪ್ ವಾಲ್ಮೀಕಿ ಅವರನ್ನು ಬೆಂಬಲಿಸಿ, ನುಮಾಯಿಶ್ ಮೈದಾನದಲ್ಲಿ
ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವೇಳೆಯೂ, ಮಂಗಳಸೂತ್ರ ಅಸ್ತ್ರವನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಅವರು, ಕಾಂಗ್ರೆಸ್ ಆಡಳಿತವು ಎಲ್ಲಾ ಸಂಬಳ ಪಡೆಯುವ ವರ್ಗದವರ ಬಳಿ
ಏನಿದೆ ಎಂಬುದನ್ನು ಸಮೀಕ್ಷೆ ಮಾಡಲು ಯೋಜಿಸಿದೆ.
ನಿಮ್ಮ ವಾಹನಗಳು, ಭೂಮಿ ಇತ್ಯಾದಿ ಎಲ್ಲವನ್ನೂ ವಶಪಡಿಸಿಕೊಂಡು ವಿತರಿಸಲಾಗುವುದು ಎಂದು ಹೇಳಿದೆ. ನಗರದಲ್ಲಿ ಒಂದು ಮನೆ, ಅಪ್ಪನ ಹಳ್ಳಿಯಲ್ಲಿ ಇನ್ನೊಂದು ಮನೆ ಇದ್ದರೆ ಒಂದನ್ನು ಕಿತ್ತುಕೊಂಡು
ಸ್ವಂತ ಮನೆ ಇಲ್ಲದವನಿಗೆ ಸಿಗುತ್ತದೆ. ಈ ಚಿಂತನೆಯು ಕಮ್ಯುನಿಸ್ಟ್ ಸಿದ್ಧಾಂತದಿಂದ ಅಥವಾ ಮಾವೋವಾದಿ ಚಿಂತನೆಯಿಂದ ಪ್ರಭಾವಿತವಾಗಿದೆ. ಇದರಿಂದ ಅನೇಕ ರಾಷ್ಟ್ರಗಳು ಬಳಲುತ್ತಿವೆ. ಕಾಂಗ್ರೆಸ್ ಮತ್ತು
ಅದರ ಮೈತ್ರಿಕೂಟದ ಪಾಲುದಾರರು ಇದನ್ನು ಭಾರತದಲ್ಲಿ ಜಾರಿಗೆ ತರಲು ಬಯಸುತ್ತಾರೆ.
ಕಾಂಗ್ರೆಸ್ ನಾಯಕರು, ‘ಪರಿವಾರದ’ ಸಂತಾನದಿಂದಲೇ ಅಪಾರ ಸಂಪತ್ತನ್ನು ಗಳಿಸಿದ್ದಾರೆ ಮತ್ತು ಈಗ ಪ್ರಜೆಗಳ ಒಡೆತನದ ಆಸ್ತಿಯ ಮೇಲೆ ಅಪ್ರಾಮಾಣಿಕ ದೃಷ್ಟಿಯನ್ನು ಹೊಂದಿದ್ದಾರೆ. ಸ್ವಾತಂತ್ರ್ಯದ
ನಂತರ ಕಾಂಗ್ರೆಸ್ ಆಡಳಿತದಲ್ಲಿ ನಡೆದ ಪ್ರತಿಯೊಂದು ರಕ್ಷಣಾ ಒಪ್ಪಂದದಲ್ಲಿ ಹಗರಣಗಳು ಇದ್ದವು ಮತ್ತು ಅಲಿಘರ್ನಲ್ಲಿ ಡಿಫೆನ್ಸ್ ಕಾರಿಡಾರ್ (Défense Corridor) (ಸ್ವದೇಶಿ ರಕ್ಷಣಾ ವಸ್ತುಗಳ ತಯಾರಿಕೆ)
ಯಂತಹ ಯೋಜನೆಗಳಿಗೆ ಕಾಂಗ್ರೆಸ್ ಎಂದಿಗೂ ಅವಕಾಶ ನೀಡಲಿಲ್ಲ, ಏಕೆಂದರೆ ಅದು ಅವರ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತದೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ: ರಾಷ್ಟ್ರೀಯ ಕಟ್ಟಡ ನಿರ್ಮಾಣ ಮಂಡಳಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ