Bengaluru Rural : ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ಸರಕು ಸಾಗಣೆಗೆ ನೆರವಾಗುವ ನಿಟ್ಟಿನಲ್ಲಿ (National Logistics Park in Nelamangala) ರಾಷ್ಟ್ರಮಟ್ಟದ ಮಲ್ಟಿ ಮಾಡಲ್
ಲಾಜಿಸ್ಟಿಕ್ ಪಾರ್ಕ್ (Logistic Park) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನಲ್ಲಿ ಸ್ಥಾಪನೆಯಾಗಲಿದ್ದು, 1,770 ಕೋಟಿ ರೂ. ವೆಚ್ಚದಲ್ಲಿ
400 ಎಕರೆ (National Logistics Park in Nelamangala) ಪ್ರದೇಶದಲ್ಲಿ ನಿರ್ಮಾಣವಾಗಲಿದೆ.
ಅಂತರ್ ರಾಜ್ಯ ಸಂಪರ್ಕ ಮತ್ತು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ತ್ಯಾಮಗೊಂಡ್ಲು ಹೋಬಳಿಯ ಮುದ್ದಲಿಂಗನಹಳ್ಳಿ ಬಳಿಯ ಓಬಳಾಪುರ ಕೈಗಾರಿಕಾ ಪ್ರದೇಶದಲ್ಲಿ ಈ
ಪಾರ್ಕ್ ತಲೆ ಎತ್ತಲಿದ್ದು, 400 ಎಕರೆ ಪ್ರದೇಶದಲ್ಲಿ 1,770 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ರಾಜ್ಯಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ.
ನ್ಯಾಷನಲ್ ಹೈವೇಸ್ ಲಾಜಿಸ್ಟಿಕ್ಸ್ ಮ್ಯಾನೇಜ್ಮೆಂಟ್ (National Highway Logistics Management) ಸಂಸ್ಥೆ ಖಾಸಗಿ ಸಹಭಾಗಿತ್ವದಲ್ಲಿ ನಡೆಯುವ ಈ ಯೋಜನೆಗೆ ಈಗಾಗಲೇ ಸಹಿ ಹಾಕಿದ್ದು,
ಪಾಥ್ ಬೆಂಗಳೂರು ಲಾಜಿಸ್ಟಿಕ್ಸ್ ಪಾರ್ಕ್ ಸಂಸ್ಥೆ ಮತ್ತು ಸರ್ಕಾರಿ ಸ್ವಾಮ್ಯದ ಬೆಂಗಳೂರು ಎಂಎಂಎಲ್ಪಿ (MMLP) ನಡುವೆ ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿದ ಒಪ್ಪಂದ ಅಂತಿಮಗೊಂಡಿದೆ.
ಭಾರತದಲ್ಲೇ ಅತ್ಯಂತ ದೊಡ್ಡ ಲಾಜಿಸ್ಟಿಕ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಎಂಎಂಎಲ್ಪಿ ಇದಾಗಿದೆ.
ಈ ಯೋಜನೆಯನ್ನು ಒಟ್ಟು 3 ಹಂತಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಮೊದಲ ಹಂತ ಮುಂದಿನ 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಆ ಮೂಲಕ ಬರೋಬ್ಬರಿ 3 ಕೋಟಿ ಮೆಟ್ರಿಕ್ ಟನ್
(Metric Ton) ಸರಕನ್ನು ಒಂದೇ ಸ್ಥಳದಲ್ಲಿ ಸಂಗ್ರಹ, ಸಾಗಣೆಗೆ ಅಗತ್ಯ ಸೌಕರ್ಯ ಒದಗಿಸುವ ಬೃಹತ್ ಪ್ರದೇಶ ನಿರ್ಮಾಣವಾಗುತ್ತಿದೆ.
ರಾಜಧಾನಿ ಬೆಂಗಳೂರಿನ ಸುತ್ತಲೂ ಹರಡಿರುವ ಸ್ಯಾಟಲೈಟ್ (Satellite) ನಗರಗಳಿಗೆ ಲಾಜಿಸ್ಟಿಕ್ ಪಾರ್ಕ್ ವರದಾನವಾಗಲಿದ್ದು, ಮುಖ್ಯವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ,
ಓಬದೇನಹಳ್ಳಿ, ಸೋಂಪುರ, ಪಿಳ್ಳಗುಂಪೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಾಟ ನಡೆಸಲು ನೆರವಾಗಲಿದ್ದು, ತುಮಕೂರು, ರಾಮನಗರ, ಬೆಂಗಳೂರುನಗರ
ವ್ಯಾಪ್ತಿಯ ಕೈಗಾರಿಕಾ ಪ್ರದೇಶ ಮಾತ್ರವಲ್ಲದೇ ರಾಜ್ಯದ ಇತರೆ ಜಿಲ್ಲೆಗಳಿಗೆ ಸಾಕಷ್ಟು ಸಹಕಾರಿಯಾಗಲಿದೆ.
ದಾಬಸ್ಪೇಟೆಯಿಂದ ಕೆಂಪೇಗೌಡ (Kempegowda) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ರಾಷ್ಟ್ರೀಯ ಹೆದ್ದಾರಿ 648 ನಿರ್ಮಾಣ ಅಂತಿಮ ಹಂತದಲ್ಲಿದ್ದು, ವಿದೇಶಗಳ ಸರಕು ಸಾಗಣಿಕೆಗೆ
ಸುಲಭವಾಗಲಿದ್ದು, ಕೈಗಾರಿಕಾ ಕಚ್ಚಾ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೇ, ಹೆದ್ದಾರಿ ಸೌಕರ್ಯವುಳ್ಳ ಪ್ರದೇಶದಲ್ಲಿ
ಲಾಜಿಸ್ಟಿಕ್ ಪಾರ್ಕ್ ಅನ್ನು ಸ್ಥಾಪಿಸಲಾಗುತ್ತದೆ.
ಇದನ್ನು ಓದಿ: ಗೋ ಹತ್ಯೆ ಕೇಸ್: ಮನೇಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್
- ಭವ್ಯಶ್ರೀ ಆರ್.ಜೆ