ಕಣ್ಣು ಕಾಣದ 58 ವರ್ಷದ ವೃದ್ದೆ ಮಹಿಳೆ ಮೇಲೆ ಅತ್ಯಾಚಾರ, ಮನನೊಂದು ವೃದ್ದೆ ಆತ್ಮಹತ್ಯೆ

Vijayanagara : ಇದು ನಿಜವಾಗಲೂ ನಾಗರಿಕ ಸಮಾಜವೇ ನಾಚಿಕೆಯಿಂದ ತಲೆತಗ್ಗಿಸುವಂತಹ ಸುದ್ದಿಯಾಗಿದೆ ಏಕೆಂದರೆ ಆ 58 ವರ್ಷದ ವೃದ್ದೆ ಮಹಿಳೆಗೆ ಕಣ್ಣು ಕಾಣ್ತಿರಲಿಲ್ಲ ಆಕೆಯ (old woman was raped)

ಊರಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಆಕೆಯ ಮಗಳು ಮತ್ತು ಕುಟುಂಬದವರು ಹಾಜರಿದ್ದರು.

ಆದರೆ ಮನೆಯಲ್ಲಿ ಇವರು ಒಬ್ಬರೇ ಇರುವ ಸಂದರ್ಭದಲ್ಲಿ ನೆರವು ನೀಡುವ ನೆಪದಲ್ಲಿ ಕಾಮುಕನೊಬ್ಬ ಅವಾಚ್ಯ ಕೃತ್ಯ ಎಸಗಿದ್ದಾನೆ, ಅವನು ತನ್ನ ತಾಯಿಯ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ್ದಾನೆ.

ಈ ಹೃದಯವಿದ್ರಾವಕ ಘಟನೆಯು ಮಹಿಳೆಯ ಆತ್ಮಹತ್ಯೆಗೆ ಕಾರಣವಾಯಿತು. ಈ ದುಷ್ಕೃತ್ಯದಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ನ್ಯಾಯ ಕೊಡಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಆ ವ್ಯಕ್ತಿ ಮಾಡಿದ ಘೋರವಾದ ಅಪರಾಧಕ್ಕೆ ಕಠಿಣ ಶಿಕ್ಷೆಯಾಗುವಂತೆ ಅಧಿಕಾರಿಗಳೊಂದಿಗೆ ವಾದಿಸಿದರು. ತಡವಾಗಿ ಸ್ಥಳಕ್ಕೆ ಆಗಮಿಸಿದ ಹಗರಿಬೊಮ್ಮನಹಳ್ಳಿ (Hagaribommanahalli) ತಹಸೀಲ್ದಾರ್‌ಗೆ ನೆರೆದಿದ್ದವರು

ಛೀಮಾರಿ ಹಾಕಿದರು. ಹೇಯ ಕೃತ್ಯಕ್ಕೆ ಸಾಕ್ಷಿಯಾದ ಹೆಂಗಸರು ಅಳುತ್ತಿದ್ದ ದೃಶ್ಯ ನಿಜಕ್ಕೂ ಮನಕಲಕುವಂತಿತ್ತು. ವಯೋವೃದ್ಧೆಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ ಘಟನೆಗೆ ಇಡೀ ನಾಗರಿಕ ಸಮಾಜವೇ

ಆಕ್ರೋಶ ವ್ಯಕ್ತಪಡಿಸಿದ್ದು, ಈ ಕೃತ್ಯವನ್ನು ಸಾರ್ವತ್ರಿಕವಾಗಿ (old woman was raped) ಖಂಡಿಸಲಾಗಿದೆ.

ಇದನ್ನೂ ಓದಿ : https://vijayatimes.com/gruha-jyoti-scheme-karnataka/

ಇದು ಈ ಜಗತ್ತಿನಲ್ಲಿ ಯಾರೂ ಸಮರ್ಥಿಸಲು ಅಥವಾ ಕ್ಷಮಿಸಲು ಸಾಧ್ಯವಾಗದ ಭಯಾನಕ ಕಾರ್ಯವಾಗಿದೆ. ಇಂತಹ ಹೇಯ ಕೃತ್ಯ ಮಾಡಿರುವನ ಹೆಸರು ಲೋಕೇಶ ನಾಯ್ಕ್ (Lokesh Naik). ಹಗರಿಬೊಮ್ಮನಹಳ್ಳಿ

ತಾಲೂಕಿನ ವ್ಯಾಸಪುರ ತಾಂಡಾದ ಲೋಕೇಶ ನಾಯ್ಕ ಮದುವೆಯಾಗಿ ಮಗುವಿದೆ. ಈ ವೇಳೆ ಆತ ತನ್ನ ತಾಯಿಯ ವಯಸ್ಸಿನ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಸಂತ್ರಸ್ತೆಯ ಕುಟುಂಬವು ಊರಿನಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಇತ್ತ ಮನೆಯಲ್ಲಿ ಒಬ್ಬಳೇ ಇರುವ ವೃದ್ಧೆಯ ಮೇಲೆ ಅತ್ಯಾಚಾರ ಮಾಡುವ ಮೂಲಕ ಪಾಪಿ ತನ್ನ ಕರಾಳ ಮುಖವನ್ನು ತೆರೆದಿಟ್ಟಿದ್ದಾನೆ.

ಅಂಧ ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಯಾರೂ ಇಲ್ಲದ ಮನೆಗೆ ಕರೆದೊಯ್ದು ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾನೆ.


ಆರೋಪಿ ಲೋಕೇಶ ನಾಯ್ಕ ಮೇ 30 ರಂದು 58 ವರ್ಷದ ಅಂಧ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಲೋಕೇಶ್ ಅವರ ದುರ್ವರ್ತನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ವಯೋವೃದ್ಧರನ್ನು ಆಸ್ಪತ್ರೆಗೆ

ದಾಖಲಿಸಲಾಗಿತ್ತು. ನಿನ್ನೆ ಶುಕ್ರವಾರ ಮತ್ತೆ ಗ್ರಾಮಕ್ಕೆ ಬಂದ ಮಹಿಳೆ ವಯಸ್ಸಾದ ತನಗೇ ಹಿಂಗಾಯ್ತಲ್ಲ ಎಂದು ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ವೃದ್ಧೆ ಸಾವಿನ ಸುದ್ದಿ ತಿಳಿದ ಕೂಡಲೇ ಗ್ರಾಮಸ್ಥರು ಒಂದಾದ ನಂತರ ಒಂದರಂತೆ ಜಮಾಯಿಸಿದ್ದು, ಪೊಲೀಸರು ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. 58 ವಯಸ್ಸಿನ ವೃದ್ಧೆ ಮೇಲೆ ಕಾಮುಕನೊಬ್ಬ ಹೇಯ ಕೃತ್ಯ ಎಸಗಿದ್ದು,

ಆತನನ್ನು ನೇಣಿಗೇರಿಸಬೇಕು ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು.

ಇದನ್ನೂ ಓದಿ : https://vijayatimes.com/coromandel-express-train-tragedy/

ಹಿರಿಯ ಅಧಿಕಾರಿಗಳು ಯಾರೂ ಕೂಡ ವೃದ್ದೆಯ ಮೇಲೆ ಅತ್ಯಾಚಾರವಾದರೂ ಸ್ಥಳಕ್ಕೆ ಬಾರದ ಪರಿಣಾಮ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ನಂತರ ಹಗರಿಬೊಮ್ಮನಹಳ್ಳಿ ತಹಶೀಲ್ದಾರ್​​ (Hagaribommanahalli

Tehsildar) ಸ್ಥಳಕ್ಕೆ ಭೇಟಿ ನೀಡಿದರು ಅಷ್ಟರಲ್ಲಿ ಸಂಬಂಧಿಕರು ತರಾಟೆಗೆ ತಗೆದುಕೊಂಡರು.

ಆರೋಪಿ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೊನೆಗೆ ತಹಶೀಲ್ದಾರ್​​ ಮತ್ತು ಪೊಲೀಸರು ಗ್ರಾಮಸ್ಥರಿಗೆ ಮತ್ತು ಸಂಬಂಧಿಕರಿಗೆ ಭರವಸೆ ನೀಡಿದರು.ಕಣ್ಣು ಕಾಣದ ವೃದ್ದೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪಿ

ಲೋಕೇಶ ನಾಯ್ಕ್ ನನ್ನ ಪೊಲೀಸರು ಈಗಾಗಲೇ ಬಂಧಿಸಿ ಈಗಾಗಲೇ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version