Jaipur (Rajasthan): ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮುಸ್ಲಿಮರಿಗೆ ಮಾತ್ರ ಈ (PM Against On Congress) ದೇಶದ ಸಂಪತ್ತಿನ ಮೊದಲ ಹಕ್ಕು ಇರುತ್ತದೆ ಎಂದು ಹೇಳಿತ್ತು ಎಂದು
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾಡಿರುವ ಗಂಭೀರ ಆರೋಪ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ತಲೆನೋವು ತಂದಿದೆ.
ಲೋಕಸಭಾ ಚುನಾವಣಾ ಪ್ರಚಾರಕಾರ್ಯ ನಿಮಿತ್ತ ರಾಜಸ್ಥಾನದ ಬನ್ಸ್ವಾರಾದಲ್ಲಿ ಬೃಹತ್ ಸಮಾವೇಶವನ್ನುಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ (Congress) ಪಕ್ಷ ಅಧಿಕಾರದಲ್ಲಿದ್ದಾಗ
ಮುಸ್ಲಿಮರಿಗೆ ಮಾತ್ರ ಈ ದೇಶದ ಸಂಪತ್ತಿನ ಮೊದಲ ಹಕ್ಕು ಇರುತ್ತದೆ ಎಂದು ಹೇಳಿತ್ತು. ದೇಶದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇಡೀ ದೇಶದ ಸಂಪತ್ತನ್ನು ಒಳನುಗ್ಗುವವರು ಮತ್ತು ಹೆಚ್ಚು
ಮಕ್ಕಳನ್ನು ಹೊಂದಿರುವವರಿಗೆ ಹಂಚಬಹುದು (PM Against On Congress) ಎಂದು ವಾಗ್ದಾಳಿ ನಡೆಸಿದ್ದಾರೆ.
ಒಂದು ವರ್ಗ ಕಷ್ಟಪಟ್ಟು ಸಂಪಾದಿಸಿರುವ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ, ಕಳ್ಳ ಮಾರ್ಗಗಳ ಮೂಲಕ ದೇಶದ ಒಳನುಗ್ಗುವವರಿಗೆ ಕಾಂಗ್ರೆಸ್ನವರು ಹಂಚುತ್ತಾರೆ. ಇದಕ್ಕಾಗಿ ನೀವು ಕಷ್ಟಪಟ್ಟು
ಸಂಪಾದಿಸಬೇಕೇ? ಕಳ್ಳ ಮಾರ್ಗಗಳ ಮೂಲಕ ಬರುವ ನುಸುಳುಕೋರರಿಗೆ ದೇಶದ ಸಂಪತ್ತನ್ನು ನೀಡಬಹುದೇ ಎಂದು ಮೋದಿ ಪ್ರಶ್ನಿಸುವ ಮೂಲಕ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ವ್ಯಕ್ತಿಗಳ ಆಸ್ತಿಗಳನ್ನು ಸಮೀಕ್ಷೆ ನಡೆಸುವುದಾಗಿ ಘೋಷಿಸಿದೆ. ಕಾಂಗ್ರೆಸ್ ಪಕ್ಷ ಈ ದೇಶದ ಸಂಪತ್ತನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಮರುಹಂಚಿಕೆ ಮಾಡುವ ಭರವಸೆಯನ್ನು
ಹೇಗೆ ನೀಡುತ್ತದೆ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಹೇಳಿದ್ದು ನಿಜವೇ..?
2006ರಲ್ಲಿ ನಡೆದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ (Manamohan Singh) ಅವರು, “ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರು
ಸಂಪನ್ನತ್ತು ಸಮಾನವಾಗಿ ಹಂಚಿಕೊಳ್ಳಲು ಅಧಿಕಾರವನ್ನು ಖಚಿತಪಡಿಸಿಕೊಳ್ಳಲು ನಾವು ಹೊಸ ಯೋಜನೆಗಳನ್ನು ರೂಪಿಸಬೇಕು. ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕನ್ನು ಮುಸ್ಲಿಂಮರು ಹೊಂದಿರಬೇಕು
ಎಂದು ಹೇಳಿದ್ದರು. ಮೋದಿ ಭಾಷಣದ ಬಳಿಕ ಬಿಜೆಪಿ (BJP), ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಭಾಷಣದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ: ಮೋದಿ ಪರ ಹಾಡು ರಚಿಸಿದ್ದಕ್ಕೆ ಮತಾಂಧ ಯುವಕರಿಂದ ಹಲ್ಲೆ