Bengaluru: ಸಿಲಿಕಾನ್ ಸಿಟಿಯಲ್ಲಿ ದುರಸ್ತಿ ಕಾಮಗಾರಿಯಿಂದಾಗಿ ಕೆಪಿಟಿಸಿಎಲ್ (KPTCL) ಮತ್ತು ಬೆಸ್ಕಾಂ ಜೂನ್ 8 ರಿಂದ 12ರವರೆಗೆ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ವರದಿ ಬಿಡುಗಡೆಯಾಗಲಿದೆ.
![KPTCL](https://sp-ao.shortpixel.ai/client/to_webp,q_glossy,ret_img,w_400,h_179/https://vijayatimes.com/wp-content/uploads/2024/06/62243917.webp)
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (Karnataka Power Transmission Corporation Limited) ಮುಂಬರುವ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಜೂನ್ (June) 12ರವರೆಗೆ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಯೋಜನೆಯಿಂದಾಗಿ ಬೆಳಗ್ಗೆ 10ರಿಂದ ಸಂಜೆ 4ರ ನಡುವೆ ವಿದ್ಯುತ್ ಕಡಿತವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಹಾಗಾದರೆ ಯಾವ ಯಾವ ಸ್ಥಳಗಳಲ್ಲಿ ಕರೆಂಟ್ ಇರುವುದಿಲ್ಲ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ
ಜೂನ್ 8 (ಬೆಳಿಗ್ಗೆ 10 ರಿಂದ ಸಂಜೆ 4):
ಕ್ವೀನ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ಮಿಲ್ಲರ್ಸ್ ರಸ್ತೆ, ಕನ್ನಿಂಗ್ಹ್ಯಾಮ್ ರಸ್ತೆ, ಅಲಿ ಅಸ್ಕರ್ ರಸ್ತೆ, ಚಾಂದಿನಿ ಚೌಕ್ (Cunningham Road, Ali Askar Road, Chandni Chowk), ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ, ಬಂಬೂ ಬಜಾರ್ ರಸ್ತೆ, ಬ್ರಾಡ್ವೇ ರಸ್ತೆ, ಕಾಕ್ಬರ್ನ್ ರಸ್ತೆ, ಸೆಪಿಂಗ್ಸ್ ರಸ್ತೆ, ಬೌರಿಂಗ್ ಆಸ್ಪತ್ರೆ, ಇನ್ಫೆಂಟ್ರಿ ರಸ್ತೆ, ವಿವಿ ಟವರ್ಸ್, ಎಂಎಸ್ ಬಿಲ್ಡಿಂಗ್, ಸಿಐಡಿ, ಎಂಇಜಿ ಸೆಂಟರ್, ರಾಜಭವನ, ವಸಂತನಗರ, ವಿಧಾನಸೌಧ ಮತ್ತು ವಿಕಾಸ ಸೌಧ.
ಜೂನ್ 9 (ಬೆಳಿಗ್ಗೆ 10 ರಿಂದ ಸಂಜೆ 4):
ಯಡಿಯೂರು, ದೊಡ್ಡಮದುರೆ, ಮನವಳ್ಳಿ, ಕಾಚೇನಹಳ್ಳಿ, ನಾಗಸಂದ್ರ, ಸಿಟಿ ಪಾಳ್ಯ (Nagasandra, City Palya) ತಿಪ್ಪೂರು, ಹೇಮಾವತಿ ಮತ್ತು ಚಿಕ್ಕಮದುರೆ.
![](https://sp-ao.shortpixel.ai/client/to_webp,q_glossy,ret_img,w_621,h_335/https://vijayatimes.com/wp-content/uploads/2024/06/bescom.webp)
ಜೂನ್ 10 (ಬೆಳಿಗ್ಗೆ 10 ರಿಂದ ಸಂಜೆ 4):
ಸಿ ಕುಪ್ಪೆ, ತಾವರೆಕೆರೆ, ಹಕ್ಕಿ ಮಾರಿಪಾಳ್ಯ, ಹಂಗರಹಳ್ಳಿ, ಎಂ.ಎಚ್.ಪಾಳ್ಯ, ಟಿ.ಬೊಮ್ಮೇನಹಳ್ಳಿ (T Bommanahalli, M.H Palya) ನೀಲಸಂದ್ರ ಮತ್ತು ಆರ್ ಬ್ಯಾಡರಹಳ್ಳಿ.
ಜೂನ್ 11 (ಬೆಳಿಗ್ಗೆ 10 ರಿಂದ ಮಧ್ಯಾಹ್ನ 3):
ಆಡುಗೋಡಿ, ಸಾಲಪುರಿಯ ಟವರ್, ಚಿಕ್ಕ ಆಡುಗೋಡಿ, ನಂಜಪ್ಪ ಲೇಔಟ್ (Nanjappa Layout), ಚಿಕ್ಕ ಲಕ್ಷ್ಮಯ್ಯ ಲೇಔಟ್, ವಿಲ್ಸನ್ ಗಾರ್ಡನ್, ಲಕ್ಕಸಂದ್ರ ಮತ್ತು ಲಾಲ್ಜಿನಗರ.
ಜೂನ್ 12 (ಬೆಳಿಗ್ಗೆ 10 ರಿಂದ ಮಧ್ಯಾಹ್ನ 3):
ಶ್ರೀನಗರ, ಹೊಸಕೆರೆಹಳ್ಳಿ, ವೀರಭದ್ರನಗರ, ನ್ಯೂ ಟಿಂಬರ್ಯಾರ್ಡ್ (ಎನ್ಟಿವೈ) ಲೇಔಟ್, ತ್ಯಾಗರಾಜನಗರ, ಬಿಎಸ್ಕೆ III ಹಂತ (BSK 3rd Phase), ಕತ್ರಿಗುಪ್ಪೆ, ಗಿರಿನಗರ 4ನೇ ಹಂತ, ವಿಲ್ಸನ್ ಗಾರ್ಡನ್, ಜೆಸಿ ರಸ್ತೆ, ಶಾಂತಿನಗರ, ರಿಚ್ಮಂಡ್ ಸರ್ಕಲ್ (Richmond Circle), ಎಲ್ ರೆಸಿಡೆನ್ಸಿ ರಸ್ತೆ ರಸ್ತೆ, ಸಂಪಂಗಿರಾಮ ನಗರ, ಕೆ ಎಚ್ ರಸ್ತೆ, ಸುಬ್ಬಯ್ಯ ವೃತ್ತ ಮತ್ತು ಸುಧಾಮನಗರ.
✍️ವೀರಾಜ್ ಸ್ವಾಮಿ.ಎಂ