ಅಣ್ಣಾವ್ರು ಬಂಗಾರದ ಮನುಷ್ಯ, ಅಪ್ಪು ಸರ್ ಮುತ್ತಿನಂಥ ಮನುಷ್ಯ : ರವಿವರ್ಮ!

actor

ಕರ್ನಾಟಕ ರತ್ನ(Karnataka Ratna), ಪವರ್ ಸ್ಟಾರ್(PowerStar) ಪುನೀತ್ ರಾಜ್ ಕುಮಾರ್(Puneeth Rajkumar) ಅವರನ್ನು ಸಾಹಸ ನಿರ್ದೇಶಕ(Stunt Master) ರವಿ ವರ್ಮಾ(Ravi Varma) ಅವರು ಸಿನಿಮಾದ ಒಂದು ದೃಶ್ಯವನ್ನು ನೆನದು ಭಾವುಕರಾಗಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹುಡುಗರು ಚಿತ್ರದಲ್ಲಿ ಮೂಡಿಬಂದಿರುವ ಸಾಹಸ ದೃಶ್ಯದಲ್ಲಿ ನಡೆದುಕೊಂಡ ರೀತಿ ಇಂದಿಗೂ ನನ್ನ ಕಣ್ಣಿನಲ್ಲಿ ಕಟ್ಟಿದಂತಿದೆ.

ಕನ್ನಡಾಭಿಮಾನಿಗಳ ಆರಾಧ್ಯದೈವ ಅಪ್ಪು(Appu) ಸರ್ ಅವರಿಗೆ ಸರಿಸಾಟಿ ಯಾರು ಇಲ್ಲ, ಅದಕ್ಕೆ ಅವರು ಇಂದಿಗೂ ದೇವರಾಗಿ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವುದು.

ಪುನೀತ್ ಸರ್ ಜೊತೆ ನಾನು ಇಲ್ಲಿಯವರೆಗೂ 13 ಸಿನಿಮಾಗಳಲ್ಲಿ ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಇದೇ ಮಾರ್ಚ್ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಜೇಮ್ಸ್(James) ಚಿತ್ರಕ್ಕೂ ನಾನೇ ಸಾಹಸ ನಿರ್ದೇಶನ ಮಾಡಿದ್ದೇನೆ. ಪುನೀತ್ ಸರ್ ಅವರೊಟ್ಟಿಗೆ ಕಳೆದಿರುವ ಸಾಕಷ್ಟು ಒಳ್ಳೆ ಕ್ಷಣಗಳಲ್ಲಿ ಈ ಒಂದು ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಹುಡುಗರು ಸಿನಿಮಾ ಸಾಹಸ ನಿರ್ದೇಶನ ಮಾಡಬೇಕಾದರೆ, ನಟ ಲೂಸ್ ಮಾದ ಯೋಗಿ ಕಾರನ್ನು ಹತ್ತಲು ಓಡಿ ಬರುವ ಸನ್ನಿವೇಶ ಇತ್ತು. ಆ ಸಮಯದಲ್ಲಿ ಲೂಸ್ ಮಾದ ಯೋಗಿ ಅವರ ಕಿವಿಗೆ ನಿಜಕ್ಕೂ ಪೆಟ್ಟು ಬಿತ್ತು!

ಆ ಸಮಯಕ್ಕೆ ಒಂದು ಟೇಕ್ ನಲ್ಲಿ ಆ ದೃಶ್ಯವನ್ನು ಸೆರೆಹಿಡಿಯಲು ಆಗಲಿಲ್ಲ! ನಾವು ಯೋಗಿ ಅವರ ಕಿವಿಗೆ 8 ಕ್ಕೂ ಹೆಚ್ಚು ಬಾರಿ ಬಂಬು ಬಳಸಿ ಹೊಡೆದಿದ್ದೇವೆ. ಹೆಚ್ಚು ಬಾರಿಗೆ ಹೊಡೆದ ಪರಿಣಾಮ ಅವರ ಕಿವಿಗೆ ಪೆಟ್ಟು ಬಿದ್ದಿತ್ತು, ಇದನ್ನು ಕಂಡ ಅಪ್ಪು ಸರ್ ಕೂಡಲೇ ಬಂದು ಯೋಗಿ ಅವರ ಕಿವಿಗೆ ಟಿಂಚರ್ ಹಚ್ಚುವ ಮೂಲಕ ಕಾಳಜಿ, ಸರಳತೆ ತೋರಿದರು. ಸಿನಿಮಾದಲ್ಲಿ ಬಹಳ ಮುಖ್ಯವಾದ ಸೀನ್ ಇದ್ದಾಗಿದ್ದರಿಂದ ಇದು ನೈಜವಾಗಿರಬೇಕು ಎಂದು ರಾಘಣ್ಣ ಹೇಳಿದ್ದರು. ಪ್ರತಿಯೊಬ್ಬ ಸಾಹಸ ನಿರ್ದೇಶಕನಿಗೂ ಇಂಥ ಒಬ್ಬ ನಟ ಸಿಗಬೇಕು ಎಂಬ ಆಸೆ ಇರುತ್ತದೆ.

ಸ್ವಲ್ಪ ಸಮಯ ನಾನು ಕನ್ನಡದಲ್ಲಿ ಕೆಲಸ ಮಾಡಲು ಆಗಿರಲ್ಲಿಲ್ಲ. ಆಗ ಅಪ್ಪು ಸರ್ ನನ್ನನ್ನು ಕರೆದು ಕೆಲಸ ಕೊಟ್ಟಿದ್ದು, ಅದಕ್ಕೆ ಅವರಿಗೆ ನಾನು ಎಂದೆಂದಿಗೂ ಧನ್ಯವಾದ ಸಲ್ಲಿಸುವೆ. ಸದ್ಯ ಆ ವಿಷಯದ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಅಪ್ಪು ಸರ್ ಅಂಜನಿಪುತ್ರ ಸಿನಿಮಾದ ಮೂಲಕ ಮತ್ತೆ ಆಕ್ಶನ್ ಹೇಳುವಂತೆ ಮಾಡಿದರು. ಬಳಿಕ ಖುದ್ದಾಗಿ ನನಗೆ ಪ್ರೋತ್ಸಾಹ ನೀಡಿ, ಯಾವುದಕ್ಕೂ ತಲೆಕಡಿಸಿಕೊಳ್ಳಬೇಡಿ ಎಂದು ಹೇಳಿದರು. ಅಪ್ಪು ಅವರ ಜೊತೆಗೆ ಕಳೆದ ನೆನಪುಗಳನ್ನು ರವಿವರ್ಮ ಅವರು ಮೆಲುಕು ಹಾಕಿದ್ದಾರೆ.
Exit mobile version