ಪ್ರಧಾನಿ ರೈತರೊಂದಿಗೆ ‘ಜನ್ ಕೀ ಬಾತ್’ ಆಡದಿರುವುದು ವಿಪರ್ಯಾಸ: ಕಾಂಗ್ರೆಸ್ ಟೀಕೆ

ಬೆಂಗಳೂರು, ಜ. 04: ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ದೇಶದಲ್ಲಿ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನೂರಾರು ರೈತರು ಕಳೆದ ಹಲವು ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ರೈತರ ಸಮಸ್ಯೆ ಆಲಿಸದ ಪ್ರಧಾನಿ ಮೋದಿ ಅವರ ನಡೆ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಸೌರವ್ ಗಂಗೂಲಿ ಶೀಘ್ರ ಗುಣಮುಖರಾಗಲಿ, ಆಗುತ್ತಾರೆ. ನರೇಂದ್ರ ಮೋದಿ
ಅವರಿಗೆ ಸೌರವ್’ರೊಂದಿಗೆ ಮಾತಾಡಲು ಸಮಯವಿದೆ.

50ಕ್ಕೂ ಹೆಚ್ಚು ರೈತರು ಜೀವ ಕಳೆದುಕೊಂಡ ನಂತರವೂ ಪ್ರತಿಭಟಿಸುತ್ತಿರುವ ರೈತರಲ್ಲಿ ಮಾತಾಡಲು ಸಮಯವಿಲ್ಲವೇ? ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

ಸೆಲೆಬ್ರಿಟಿಗಳೊಂದಿಗೆ ‘ಮನ್ ಕೀ ಬಾತ್’ ಆಡುವವರು ರೈತರೊಂದಿಗೆ ‘ಜನ್ ಕೀ ಬಾತ್’ ಆಡದಿರುವುದು ವಿಪರ್ಯಾಸ ಎಂದು ಟೀಕಿಸಿದ್ದಾರೆ.

Exit mobile version