ದೇವೇಗೌಡರ ಮಗ ಅನ್ನೋದು ಬಿಟ್ಟು ರೇವಣ್ಣಗೆ ಇನ್ಯಾವ ಅರ್ಹತೆ ಇದೆ? : ಪ್ರೀತಂ ಗೌಡ!

Preetham gowda

ರೇವಣ್ಣಗೆ(Revanna) ಮಾಜಿ ಪ್ರಧಾನಿ(Former Primeminister) ಎಚ್.ಡಿ ದೇವೇಗೌಡರ(HD Devegowda) ಮಗ ಅನ್ನೋದು ಬಿಟ್ಟರೆ ಇನ್ಯಾವ ಅರ್ಹತೆ ಇದೆ.

ಸರ್ಕಾರಿ ಅಧಿಕಾರಿಗಳನ್ನು ಹೀನಾಯವಾಗಿ ಬೈಯ್ಯುವ ಆತನಿಗೆ ಆಚಾರ, ವಿಚಾರ ಸಂಸ್ಕಾರ ಯಾವುದಾದ್ರು ಇದೆಯಾ? ಸದಾ ಒಂದಲ್ಲಾ ಒಂದು ವಿವಾದ ಹುಟ್ಟಿಸುತ್ತಾ ಇರೋದೆ ರೇವಣ್ಣನ ಕೆಲಸವಾಗಿದೆ ಎಂದು ಹಾಸನ ಬಿಜೆಪಿ ಶಾಸಕ(BJP MLA) ಪ್ರೀತಂ ಗೌಡ(Preetham Gowda) ರೇವಣ್ಣನ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ತಾಕತ್ ಇದ್ದರೆ ರೇವಣ್ಣಗೆ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಬಂದು ಚುನಾವಣೆ ನಿಲ್ಲುವಂತೆ ಹೇಳಿ. ನಾನು ಬಹಿರಂಗವಾಗಿ ಈ ಸವಾಲು ಹಾಕುತ್ತೇನೆ. ಹಾಸನಕ್ಕೆ ಬಂದು ರೇವಣ್ಣ ಚುನಾವಣೆಗೆ ನಿಂತರೆ, ರೇವಣ್ಣನನ್ನು 50,000 ಮತಗಳ ಅಂತರದಿಂದ ಸೋಲಿಸುತ್ತೇನೆ.

49,999 ಮತಗಳಿಂದ ನಾನು ಗೆದ್ರು ರಾಜೀನಾಮೆ ಕೊಟ್ಟು ಮರಳಿ ಚುನಾವಣೆಗೆ ಹೋಗುತ್ತೇನೆ. 50000 ಮತಗಳಿಗಿಂತ ಒಂದು ಮತ ಅಂತರ ಕಡಿಮೆಯಾದರು ನಾನು ರಾಜೀನಾಮೆ ನೀಡುತ್ತೇನೆ. ತಾಕತ್ ಇದ್ದರೆ ಬಂದು ಹಾಸನದಲ್ಲಿ ಚುನಾವಣೆಗೆ ನಿಲ್ಲಲಿ ಎಂದು ರೇವಣ್ಣಗೆ ಸವಾಲು ಹಾಕಿದರು. ಈ ರೇವಣ್ಣ ಸದಾ ಬಡ್ಡಿ-ಅಸಲು ಎಂದು ಮಾತನಾಡುತ್ತಾನೆ. ಹಾಸನಕ್ಕೆ ಬಂದರೆ ಬಡ್ಡಿಯೂ ಇಲ್ಲ, ಅಸಲು ಇಲ್ಲ. ಎಲ್ಲವನ್ನು ಕಳೆದುಕೊಂಡು ಮನೆಗೆ ಹೋಗಬೇಕಾಗುತ್ತದೆ. ನನ್ನ ವಿರುದ್ದ ಮಾತನಾಡುತ್ತಾ, ಹಾಸನ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಮನರಂಜನೆ ನೀಡುವುದೇ ರೇವಣ್ಣನ ಕೆಲಸವಾಗಿದೆ.

ಇದೆಲ್ಲವನ್ನು ನಿಲ್ಲಿಸಿ ಹೊಳೆನರಸೀಪುರಕ್ಕೆ ಹೋಗಿ ಸುಮ್ಮನೆ ನಿಮ್ಮ ಕೆಲಸ ನೋಡಿಕೊಳ್ಳಿ. ಇನ್ನು ಓದುವವರ ಕಷ್ಟ ಏನೆಂದು ರೇವಣ್ಣಗೆ ಗೊತ್ತಿಲ್ಲ. ಏಳನೇಯ ಕ್ಲಾಸು, ಹತ್ತನೇಯ ಕ್ಲಾಸು ಓದುವ ಇಂತವರಿಗೆ ಕಷ್ಟಪಟ್ಟು ಓದಿ ಸರ್ಕಾರಿ ನೌಕರಿ ತೆಗೆದುಕೊಳ್ಳುವರ ಕಷ್ಟ ಗೊತ್ತಿಲ್ಲ. ಆಚಾರ-ವಿಚಾರ ಇಲ್ಲದೇ ಅಧಿಕಾರಿಗಳಿಗೆ ಏಕವಚನದಲ್ಲಿ ಮಾತನಾಡುತ್ತಾನೆ. ಈತನ ಮಾತಿಗೆ ನಾನು ಬೆಲೆ ಕೊಡುವುದಿಲ್ಲ. ಯಾವುದಾದ್ರು ಕಾಲೇಜು ಹುಡುಗ ಕೇಳಿದ್ರು ಉತ್ತರಿಸುತ್ತೇನೆ.

ಏಳನೇಯ ಕ್ಲಾಸು, ಹತ್ತನೇಯ ಕ್ಲಾಸು ಓದಿರುವ ರೇವಣ್ಣಗೆ ನಾನು ಏನು ಹೇಳುವುದಿಲ್ಲ ಎಂದು ವ್ಯಂಗ್ಯವಾಡಿದರು.

Exit mobile version