New Delhi: ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಗೆ ಮುಹೂರ್ತ ನಿಗದಿಯಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಇದಕ್ಕಾಗಿ ಭರದಿಂದ ಪ್ರಚಾರ ಕಾರ್ಯ ನಡೆಸುತ್ತಿವೆ. ಈ ಮಧ್ಯೆ ಪ್ರತಿಪಕ್ಷಗಳ ʼಇಂಡಿಯಾʼ ಒಕ್ಕೂಟ ಶಕ್ತಿ ಪ್ರದರ್ಶನಕ್ಕಾಗಿ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಭಾನುವಾರ ಸಭೆ ನಡೆಸಿದೆ.
ಈ ʼಲೋಕತಂತ್ರ ಬಚಾವೋʼ (ಪ್ರಜಾಪ್ರಭುತ್ವ ಉಳಿಸಿ) ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿ, ಮ್ಯಾಚ್ ಫಿಕ್ಸಿಂಗ್ನ ಕಿಂಗ್ ಪಿನ್ ಮೋದಿ ಎಂದಿದ್ದಾರೆ.
ಇನ್ನು ಕೇಂದ್ರ ಸರ್ಕಾರವನ್ನು ಟೀಕಿಸಲು ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಹೋಲಿಸಿ “ಈಗ ಐಪಿಎಲ್ (IPL) ಪಂದ್ಯಗಳು ನಡೆಯುತ್ತಿವೆ. ಅಂಪೈರ್ಗಳ ಮೇಲೆ ಒತ್ತಡ ಹೇರಿದಾಗ, ಆಟಗಾರರನ್ನು ಖರೀದಿಸಿದಾಗ ಮತ್ತು ನಾಯಕರಿಗೆ ಪಂದ್ಯಗಳನ್ನು ಗೆಲ್ಲುವಂತೆ ಬೆದರಿಕೆ ಹಾಕಿದಾಗ ಅದನ್ನು ಮ್ಯಾಚ್ ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ. ಮುಂದೆ ನಡೆಯುವ ಲೋಕಸಭಾ ಚುನಾವಣೆಯ ಅಂಪೈರ್ಗಳನ್ನು ಪ್ರಧಾನಿ ಮೋದಿ ಆಯ್ಕೆ ಮಾಡಿದ್ದಾರೆ.ಯಾರಿಗೆ ಎಷ್ಟು ನೀಡಿದ್ರೆ ಬೆಸ್ಟ್ ಅಂತ ಅವರಿಗೆ ತಿಳಿದಿದೆ ಹಾಗಾಗಿ ಮ್ಯಾಚ್ ಫಿಕ್ಸಿಂಗ್ ಕಿಂಗ್ ಪಿನ್ (Match Fixing King Pin) ʼ ಎಂದು ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ (AAP)ಯಿಂದ ಈ ರ್ಯಾಲಿ ಆಯೋಜಿಸಲಾಗಿದೆ. ಕ್ರೇಜಿವಾಲ್
ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಜತೆಗೆ ಭೂ ಹಗರಣದ ಸಂಬಂಧ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಜನವರಿ 31ರಂದು ಬಂಧಿಸಲಾಗಿದೆ. ಈ ಇಬ್ಬರನ ಬಂಧನವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ (Rahul Gandhi), “ನಮ್ಮ ತಂಡದ ಇಬ್ಬರು ಆಟಗಾರರನ್ನು ಪಂದ್ಯಕ್ಕೆ ಮೊದಲೇ ಬಂಧಿಸಲಾಗಿದೆ”ಹೀಗೆ ಆಡಲು ಪ್ರಧಾನಿ ಮೋದಿ ಬಲು ಚತುರ ಎಂದು ಹೇಳಿದ್ದಾರೆ.