ಚೆನೈ ಜ 18 : ವಿಭಿನ್ನ ಸ್ಟೈಲ್ಗಳಿಂದ ಹೆಸರುವಾಸಿಯಾಗಿರುವ ಹೆಚ್ಚು ಖ್ಯಾತಿ ಪಡೆದುಕೊಂಡಿರುವ ಟಾಲಿವುಡ್ ಮಾಸ್ಕಿಂಗ್ ನಟ ಎಂದರೆ ಅದು ತಲೈವಾ ರಜನಿಕಾಂತ್ ಅವರು. ಸದ್ಯ ರಜನಿಕಾಂತ್ ಅವರ ಮಗಳ ವಿವಾದ ಹೆಚ್ಚು ಸುದ್ದಿಯಲ್ಲಿರುವುದು ವಿಷಾದಕರವಾದ ಸಂಗತಿ ಎನ್ನಬಹುದು. ಹೌದು ! ರಜನಿಕಾಂತ್ ಇಬ್ಬರ ಪುತ್ರಿಯಲ್ಲಿ ಹಿರಿಯ ಪುತ್ರಿಯಾದ ಐಶ್ವರ್ಯಅವರು ತಮ್ಮ ಪತಿ ನಟ ಧನುಷ್ಅವರಿಗೆ ವಿಚ್ಚೇಧನ ನೀಡುವ ಬಗ್ಗೆ ಬಹಿರಂಗವಾಗಿ ತಿಳಿಸಿದ್ದಾರೆ. ಈ ಬಗ್ಗೆ ಅಸಲಿ ಕಾರಣ ಇಲ್ಲಿದೆ ನೋಡಿ.
ರಜನಿಕಾಂತ್ ಮಗಳು ಐಶ್ವರ್ಯ ಹಾಗೂ ನಟಧನುಷ್ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದವರು. 18 ವರ್ಷಗಳ ಸಾಂಸರೀಕ ಜೀವನಕ್ಕೆ ಒಂದು ವಿರಾಮ ಬೇಕಿದೆ ಎಂದು ನಿರ್ಧರಿಸಿ ದಂಪತಿಗಳಿಬ್ಬರು ಬೇರೆಯಾಗುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನನ್ನ ಹಾಗೂ ಐಶ್ವರ್ಯ ಅವರ ಖಾಸಗಿತನವನ್ನು ದಯವಿಟ್ಟು ಎಲ್ಲರೂ ಗೌರವಿಸುವಂತೆ ತಮ್ಮ ಹೇಳಿಕೆಯಲ್ಲಿ ಕೇಳಿಕೊಂಡಿದ್ದಾರೆ.
ತಮ್ಮ ಸಂಬಂಧದ ಕುರಿತು ಸಾಮಾಜಿಕ ಜಾಲ ತಾಣವಾದ ಟ್ವಿಟರ್ನಲ್ಲಿ ಧನುಷ್ ಈ ರೀತಿ ತಿಳಿಸಿದ್ದಾರೆ. “ಹದಿನೆಂಟು ವರ್ಷಗಳ ಕಾಲ ಸ್ನೇಹಿತರು, ದಂಪತಿಗಳು, ಪೋಷಕರಂತೆ ಮತ್ತು, ಪರಸ್ಪರ ಹಿತೈಷಿಗಳಾಗಿ ಈ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದ್ದೇವು. ಇಂದು ನಾವು, ಹಾಗೂ ನಮ್ಮ ಮಾರ್ಗಗಳು ಪ್ರತ್ಯೇಕವಾಗಿರುವ ಸ್ಥಳದಲ್ಲಿ ನಿಂತಿದೆ. ಐಶ್ವರ್ಯ ಹಾಗೂ ನಾನು ದೂರ ಸರಿಯಲು ನಿರ್ಧರಿಸಿದ್ದೇವೆ. ಜೋಡಿಯಾಗಿ ಮತ್ತುಉತ್ತಮ ವ್ಯಕ್ತಿಗಳಾಗಿ ನಮ್ಮನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರಗಳನ್ನು ಗೌರವಿಸಿ ಮತ್ತುಇದನ್ನುಎದುರಿಸಲು ನಮಗೆ ಅಗತ್ಯವಿರುವ ಸಮಯವನ್ನು ನೀಡಿ” ಎಂದು ನಟ ಧನುಷ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಟ ಧನುಷ್ 2004ರಲ್ಲಿ ನಟ ರಜನಿಕಾಂತ್ ಅವರ ಹಿರಿಯ ಮಗಳಾದ ಐಶ್ವರ್ಯಅವರನ್ನು ಪ್ರೀತಿಸಿ ವಿವಾಹವಾದರು. ಈ ದಂಪತಿಗಳಿಗೆ ಇಬ್ಬರುಗಂಡು ಮಕ್ಕಳಿದ್ದಾರೆ. ಯಾತ್ರಾರಾಜ್ ಮತ್ತು ಲಿಂಗ ರಾಜ್. ಈ ಕುರಿತು ಐಶ್ವರ್ಯ ಅವರು ಕೂಡ ತಮ್ಮ ಸಾಮಾಜಿಕಜಾಲತಾಣದ ಖಾತೆಯಲ್ಲಿಯಾವುದೇ ಶೀರ್ಷಿಕೆ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ನಿಮ್ಮ ಪ್ರೀತಿ ಮಾತ್ರ ಅಗತ್ಯಎಂದು ಬರೆದುಕೊಂಡಿದ್ದಾರೆ.