ಬೆಂಗಳೂರು, ಡಿ. 26: ರಾಜ್ಯದಲ್ಲಿ ಬಿಜೆಪಿ ನಾಯಕರು ಪಕ್ಷಕ್ಕಾಗಿ ಹಗಲುರಾತ್ರಿ ಕೆಲಸ ಮಾಡಿದ ದುದರಿಂದ ಹೈಕಮಾಂಡ್ನಿಂದ ಸಂಕ್ರಾಂತಿ ಪ್ರಯುಕ್ತ ಭರ್ಜರಿ ಗಿಫ್ಟ್ ಸಿಕ್ಕಿದೆ.
ಹೌದು, ರಾಜ್ಯ ಬಿಜೆಪಿ ಪದಾಧಿಕಾರಿಗಳು ಪಿಕ್ನಿಕ್ ಹೋಗಬೇಕು. ಒಂದು ದಿನ ಕಡ್ಡಾಯವಾಗಿ ಪಿಕ್ನಿಕ್ ಹೋಗಲೇಬೇಕು. ಸಂಕ್ರಾಂತಿ ಕಳೆದ ಕೂಡಲೇ ಒಂದು ದಿನ ಜಾಲಿ ಟ್ರಿಪ್ಗೆ ತೆರಳಬೇಕು ಎಂದು ಹೈಕಮಾಂಡ್ ಸೂಚಿಸಿದೆ.
ರಾಜ್ಯದ ಯಾವುದಾದರೊಂದು ಸ್ಥಳಕ್ಕೆ ಟ್ರಿಪ್ ಹೋಗಬೇಕು ಎಂದು ಹೇಳಿರುವ ಹೈಕಮಾಂಡ್ ಜನವರಿ 17ರಂದು ಜಾಲಿ ಟ್ರಿಪ್ಗೆ ದಿನಾಂಕ ನಿಗದಿ ಮಾಡಿದೆ. ಜೊತೆಗೆ, ಎಲ್ಲಾ ಪದಾಧಿಕಾರಿಗಳು ಎಲ್ಲಿಗೆ ಟ್ರಿಪ್ ಹೋಗಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲು ನಿರ್ಧಾರ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಜನವರಿಯಲ್ಲಿ 1 ದಿನ ಕಡ್ಡಾಯ ಟ್ರಿಪ್ ಹೋಗಬೇಕು ಎಂದು ಬಿಜೆಪಿ ಹೈಕಮಾಂಡ್ನಿಂದ ರಾಜ್ಯ ಬಿಜೆಪಿ ಘಟಕಕ್ಕೆ ಸೂಚನೆ ಬಂದಿದೆ.