ರಮೇಶ್‌ ಜಾರಕಿಹೊಳಿ ಪ್ರಕರಣ: ಇದರ ಹಿಂದೆ ಯಾರ ನಾಯಕತ್ವ ಇದೆ ಅನ್ನೋದು ಗೊತ್ತಿದೆ; ಎಸ್.ಟಿ ಸೋಮಶೇಖರ್

ಬೆಂಗಳೂರು, ಮಾ. 06: ರಮೇಶ್ ಜಾರಕಿಹೊಳಿ ಸಿ.ಡಿ ಸ್ಫೋಟದ ಹಿಂದೆ ಯಾವ ಗುಂಪಿದೆ, ಇದಕ್ಕೆ ಯಾರು ನಾಯಕತ್ವ ಕೊಡುತ್ತಿದ್ದಾರೆ ಅನ್ನೋದು ನನಗೆ ಗೊತ್ತು ಎಂದು ಸಚಿವ ಎಸ್‌.ಟಿ ಸೋಮಶೇಖರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವ್ರು, ಸಿಡಿ ಬಹಿರಂಗದ ಹಿಂದೆ ತೇಜೋವಧೆ ಮಾಡುವ ಉದ್ದೇಶವಿದೆ. ಇದ್ರ ಹಿಂದೆ ಯಾರಿದ್ದಾರೆ ಅನ್ನೋ ಖಚಿತ ಮಾಹಿತಿ ನನಗಿದೆ. ಆದ್ರೆ, ನಾನು ಒಬ್ಬನೇ ಇದನ್ನೆಲ್ಲಾ ಹೇಳುವುದಕ್ಕೆ ಬರೋದಿಲ್ಲ ಎಂದರು.

ಇನ್ನು ರಾಜಕೀಯವಾಗಿ ತಮ್ಮ ವಿರುದ್ಧ ಫೈಟ್ ಮಾಡಲಿ. ಆದ್ರೆ, ಕ್ಷಣಾರ್ಧದಲ್ಲಿ ತೇಜೋವಧೆ ಮಾಡಬಾರದ್ರು ಅನ್ನೋದು ನಮ್ಮ ಉದ್ದೇಶ. ಹಾಗಾಗಿನೇ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಹೇಳಿದರು.

Exit mobile version