Bengaluru: ಸಾಮಾನ್ಯ ಅಪರಾಧಿಗಳನ್ನು ಬಂಧಿಸುವುದು ಅತಿ ಸುಲಭ ಆದರೆ ಸ್ಯಾಂಡಲ್ವುಡ್ ಸುಲ್ತಾನ್ (Sandalwood Sultan) ಎಂದೇ ಕರೆಸಿಕೊಳ್ಳುವ ದರ್ಶನ್ ಅವರನ್ನು ರೇಣುಕಾಸ್ವಾಮಿ ಕೇಸಲ್ಲಿ ಬಂಧಿಸುವುದು ಸುಲಭದ ಮಾತಾಗಿರಲಿಲ್ಲ. ರಾಜಕಾರಣಿಗಳ ಬೆಂಬಲವಿತ್ತು. ಹಲವು ಪೊಲೀಸರ ಸಹಾಯ ಕೂಡ ಇವರಿಗಿತ್ತು. ಬಹು ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ್ದ ನಾಯಕ ನಟನನ್ನು ಅರೆಸ್ಟ್ ಮಾಡುವುದು ನಿಜಕ್ಕೂ ಸುಲಭದ ಕೆಲಸವಲ್ಲ. ಆದರೆ ಅದನ್ನು ಮಾಡಿ ತೋರಿಸಿದ್ದು ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಅಂದ್ರೇ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಎಸ್ ಗಿರೀಶ್ (S Girish) ಹಾಗೂ ವಿಜಯನಗರದ ಎಸಿಪಿ ಚಂದನ್ ಕುಮಾರ್ (ACP Chandan Kumar).
![](https://sp-ao.shortpixel.ai/client/to_webp,q_glossy,ret_img,w_1024,h_576/https://vijayatimes.com/wp-content/uploads/2024/06/darshan-5-1024x576.webp)
ಏನಾದ್ರೂ ಒಂದಿಷ್ಟು ಲೆಕ್ಕಾಚಾರ ತಪ್ಪಿದ್ರೂ ಅವರ ಕೆಲಸಕ್ಕಷ್ಟೇ ಅಲ್ಲ, ಅವರಿಬ್ಬರ ಜೀವನಕ್ಕೂ ಕುತ್ತು ಬರ್ತಿತ್ತು. ಅಂತದ್ರಲ್ಲೂ ಯಾವುದೇ ಹಿಂದೇಟು ಹಾಕದೇ ಎಲ್ಲ ಆರಂಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ಒಂದಿಷ್ಟು ಮಾಹಿತಿಯು ಸೋರಿಕೆ ಆಗದಂತೆ ಮುಂಜಾನೆ ದರ್ಶನ್ ಅನ್ನು ಬಂಧಿಸುವಲ್ಲಿ ಗಿರೀಶ್ ಮತ್ತು ತಂಡ ಯಶಸ್ವಿಯಾಗಿತ್ತು. ಅಷ್ಟಕ್ಕೂ ಗಿರೀಶ್ ಅಂತಹ ಡೈನಾಮಿಕ್ ಅಧಿಕಾರಿ ಆಗಿರದಿದ್ದಾರೆ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ಹುಟ್ಟಿದಲ್ಲೇ ಸತ್ತು ಹೋಗ್ತಿತ್ತು.
ಬೆಳಕಿಗೆ ಬಾರದೆ ಕೊಚ್ಚೆಯಲ್ಲೇ ಕೊಚ್ಚಿಕೊಂಡು ಹೋಗಿರುತ್ತಿತ್ತು.ಆದರೆ ಪ್ರತಿಯೊಂದು ಸಾಕ್ಷವನ್ನು ಹೊಂದಿಸಿ ಕೊಲೆ ಆರೋಪದಲ್ಲಿ ಪ್ರಭಾವಿ ಸಿನಿಮಾ ನಟನಿಗೆ ಕೋಳ ತೊಡಿಸಲು ಎರಡು ಗುಂಡಿಗೆ ಬೇಕು ಅಂತಾ ಸ್ವತಃ ಹಿರಿಯ ಐಪಿಎಸ್ (IPS) ಅಧಿಕಾರಿಗಳೇ ಇದೀಗ ಹೇಳುತ್ತಿದ್ದಾರೆ.
![](https://sp-ao.shortpixel.ai/client/to_webp,q_glossy,ret_img,w_1024,h_576/https://vijayatimes.com/wp-content/uploads/2024/03/BS-Yediyurappa-1024x576.webp)
ಅಷ್ಟಕ್ಕೂ ಪೊಲೀಸ್ ವೃತ್ತಿಯಲ್ಲಿ ಸಾಕಷ್ಟು ಪಳಗಿರುವ ನ್ಯಾಯ ನೀತಿ ಗೆ ಒತ್ತುಕೊಟ್ಟು ನಿಜ ಅಪರಾಧವನ್ನು ಬಯಲಿಗೆಳೆದು ಸಾಬೀತು ಪಡಿಸುವ ಗಿರೀಶ್ ಮತ್ತು ಚಂದನ್ ಇಬ್ಬರು ಕೂಡ ಅನೇಕ ಯುವ ಪೊಲೀಸರಿಗೆ ರಿಯಲ್ ಹೀರೋಗಳು. ಏಕೆಂದರೆ ಇವರಿಬ್ಬರು ಎಷ್ಟೇ ಒತ್ತಡ ಬಂದರು ಕೂಡ ತಮ್ಮ ಕೆಲಸದಿಂದ ಹಿಂದೆ ಸರಿಯದೇ ಕಾನೂನು ಎಲ್ಲರಿಗೂ ಒಂದೇ ಅನ್ನೋದನ್ನ ಸಾರಿ ಸಾರಿ ಹೇಳಿ ಅಪರಾಧ ಯಾರು ಮಾಡಿದರೂ ಒಂದೇ ಎಂದು ಹೇಳುವ ದಕ್ಷ ಪೊಲೀಸ್ ಅಧಿಕಾರಿಗಳು.
ಪ್ರಮುಖವಾಗಿ ಎಸ್ ಗಿರೀಶ್ ಯಾರು ಎಂಬುದನ್ನು ನೋಡುವುದಾದರೆ 2011ರಲ್ಲಿ ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (B S Yediyurappa) ಅವರನ್ನು ಬಂಧಿಸಿದ್ದು ಕೂಡ ಇದೇ ಎಸ್ ಗಿರೀಶ್ ಎಂಬುದು ತಿಳಿದುಬರುತ್ತದೆ. ಇನ್ನು, ಚಂದನ್ ಕುಮಾರ್ ಅವರು ಮೊದಲು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು. ಅದಾದ ಬಳಿಕ ಪೊಲೀಸ್ ಅಧಿಕಾರಿಯಾದ ಅವರಿಗೆ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹೆಸರಿದ್ದು, ಕೇಸ್ಗಳನ್ನು ಲಾಜಿಕಲ್ ಎಂಡ್ (Logical)ಗೆ ತೆಗೆದುಕೊಂಡು ಹೋಗ್ತಾರೆ ಅಪರಾಧಿಗಳು ಎಲ್ಲೇ ಅಡಗಿದ್ದರು ಹಿಡಿದು ಜೈಲಿ (Jail) ನಲ್ಲಿ ಹಾಕಿಯೇ ಹಾಕ್ತಾರೆ ಅದ್ಯಾವ ರಾಜಕಾರಣಿ ಮಾತಿಗೂ ಬಗ್ಗದ ದಕ್ಷ ಪೊಲೀಸ್ ಅಧಿಕಾರಿ ಅಂತಾ ಕೂಡ ಎಲ್ಲರೂ ಹೇಳುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಇಬ್ಬರು ದಕ್ಷ ಪೊಲೀಸ್ ಅಧಿಕಾರಿ ಇರುವುದರಿಂದಲೇ ಈ ಕೇಸ್ ಇಲ್ಲಿಗೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ.