ಸಫಾರಿ ವಾಹನ ಹಿಂಬಾಲಿಸಿದ ಆನೆಗಳ ಹಿಂಡು

ಮೈಸೂರು, ಡಿ. 26: ಆನೆಗಳ ಹಿಂಡು ಸಫಾರಿ ವಾಹನವನ್ನು ಹಿಮ್ಮೆಟ್ಟಿಸಿದ ಘಟನೆ ಬಂಡಿಪುರ ಅಭಯಾರಣ್ಯದಲ್ಲಿ ನಡೆದಿದೆ. 

ಮೈಸೂರು ಜಿಲ್ಲೆ ಹೆಚ್. ಡಿ. ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆ. ಸಫಾರಿ ವಾಹನ ತೆರಳುತ್ತಿದ್ದ ವೇಳೆ ಆನೆಗಳ ಹಿಂಡು ಅಟ್ಟಿಸಿಕೊಂಡು ಓಡಿ ಬಂದಿತು. ಆ ವೇಳೆ ವೇಗವಾಗಿ ವಾಹನ ಚಲಾಯಿಸುತ್ತಾ ದಾಳಿಯಿಂದ ತಪ್ಪಿಸಿಕೊಂಡ ಪ್ರವಾಸಿಗರು.

ಒಂದು ಆನೆ ಪ್ರವಾಸಿಗರಿದ್ದ ವಾಹನವನ್ನು ಬೆನ್ನಟ್ಟುತ್ತಿರುವುದನ್ನು ಕಂಡು ಇಡೀ ಆನೆಗಳ ಗುಂಪೇ ಅದನ್ನು ಹಿಂಬಾಲಿಸುತ್ತಾ ಬಂದಿವೆ.
ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ. ಸದ್ಯ ಈ‌ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Exit mobile version