ಉತ್ತರ ಪ್ರದೇಶ, ನ. 27: ಸಂಭಾಲ್ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸ್ವೀಪರ್ ಹಾಗೂ ವಾರ್ಡ್ ಹುಡುಗನನ್ನು ಅಮಾನತುಗೊಳಿಸಿದೆ ಎಂದು ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ರಸ್ತೆ ಅಪಘಾತದಿಂದ ಮೃತಪಟ್ಟ ಬಾಲಕಿಯ ಶವ ಉತ್ತರ ಪ್ರದೇಶದ ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆಯನ್ನು ನಡೆಸಿ ಸ್ಟ್ರೆಚರ್ನಲ್ಲಿ ಅನಾಥವಾಗಿ ಇಡಲಾಗಿತ್ತು. ನಾಯಿಯೊಂದು ಈ ಶವವನ್ನು ತಿನ್ನುತ್ತಿರುವ ಮನಕಲುಕುವ ದೃಶ್ಯ ವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಮಾತನಾಡಿದ ಮೃತ ಬಾಲಕಿಯ ತಂದೆ, “ಈ ಘಟನೆಗೆ ಸಂಪೂರ್ಣವಾಗಿ ಆಸ್ಪತ್ರೆಯ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಒಂದು ಗಂಟೆಗಳಿಗೂ ಹೆಚ್ಚು ಕಾಲ ಗಮನಿಸಿದೇ ಬಿಟ್ಟಿದ್ದರಿಂದ ಈ ಘಟನೆ ನಡೆದಿದೆ” ಎಂದು ದೂರಿದ್ದಾರೆ.
ಅನೇಕ ಶವಗಳಿದ್ದರಿಂದ ಈ ಬೇಜವಬ್ದಾರಿತನ ನಡೆದಿದ್ದು, ಅದಗ್ಯೂ ಸ್ವೀಪರ್ ಹಾಗೂ ವಾರ್ಡ್ ಹುಡುಗನನ್ನು ಅಮಾನತುಗೊಳಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.