ಮೇಲಾಧಿಕಾರಿಗಳ ಒತ್ತಡ ಹಿನ್ನಲೆ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ನಾಪತ್ತೆ

ಶಿವಮೊಗ್ಗ ಸೆ 29 : ಜಿಲ್ಲಾಧಿಕಾರಿ ಕಛೇರಿಯ ಉದ್ಯೋಗಿಯೊಬ್ಬರು  ನಾಪತ್ತೆಯಾಗಿರುವ ಘಟನೆ ಶಿವಮೊಗ್ಗದಲ್ಲಿ  ನಡೆದಿದೆ.

ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗಿರಿರಾಜ್(39) ಎಂಬುವವರು ಮಂಗಳವಾರ ನಾಪತ್ತೆಯಾಗಿದ್ದಾರೆ.

ಮೇಲಾಧಿಕಾರಿಗಳ ಒತ್ತಡ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಶರಣಾಗುವುದಾಗಿ ಹಾಗೂ ನನ್ನ ಸಾವಿಗೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ನೇರ ಕಾರಣ ಎಂದು ಜಿಲ್ಲಾಧಿಕಾರಿ ಕಛೇರಿ ಸಿಬ್ಬಂದಿಯ ವಾಟ್ಸಾಪ್ ಗ್ರೂಪ್ ಗೆ ಸಂದೇಶವನ್ನು ಗಿರಿರಾಜ್ ವಾಟ್ಸಾಪ್ ಗ್ರೂಪ್ ಗೆ ಕಳುಹಿಸಿ ಮಂಗಳವಾರದಿಂದ  ನಾಪತ್ತೆಯಾಗಿದ್ದಾರೆ.

ಗಿರಿರಾಜ್ ಬಹಳ ಹೊತ್ತಾದರೂ ಮನೆಗೆ ಹಿಂತಿರುಗದ ಕಾರಣ ಮನೆಯವರು ಆತಂಕಗೊಂಡು, ನೆರೆಹೊರೆಯವರನ್ನು ಮತ್ತು ಸ್ನೇಹಿತರನ್ನು ವಿಚಾರಿಸಿದಾಗ ಗಿರಿರಾಜ್ ಅವರು ಕಛೇರಿ ಸಿಬ್ಬಂದಿ ವಾಟ್ಸಾಪ್ ಗ್ರೂಪ್ ಗೆ ಸಂದೇಶ ಕಳುಹಿಸಿರುವ ಮಾಹಿತಿ ತಿಳಿದುಬಂದಿದೆ.

ಗಿರಿರಾಜ್ ವಾಟ್ಸಾಪ್ ಸಂದೇಶ ಮತ್ತು ಅವರ ಕುಟುಂಬದವರು ಎಲ್ಲೆಡೆ ಕರೆ ಮಾಡಿ ವಿಚಾರಿಸುತ್ತಿದ್ದಂತೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಆತಂಕ ಸೃಷ್ಟಿಯಾಗಿದೆ.

ಗಿರಿರಾಜ್ ರವರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ಕುಟುಂಬಸ್ಥರು ದೂರನ್ನು ನೀಡಿದ್ದಾರೆ. ಗಿರಿರಾಜ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಸಹ ಎಲ್ಲೆಡೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

Exit mobile version