ಯತ್ನಾಳ್ ಸ್ಪೋಟಕ ಹೇಳಿಕೆಯ ಬೆನ್ನಲ್ಲೇ `ಪೇಮೆಂಟ್ ಸಿಎಂ’ ಎಂಬ ಅಭಿಯಾನ ಆರಂಭಿಸಿದ ಸಿದ್ದರಾಮಯ್ಯ!

congress

ಗುರುವಾರ ವಿಜಯಪುರ(Vijayapura) ಬಿಜೆಪಿ ಶಾಸಕ(BJP MLA) ಬಸವನಗೌಡ ಪಾಟೀಲ್ ಯತ್ನಾಳ್(Basavanagowda Patil Yathnal) ಕೊಟ್ಟ ಸ್ಪೋಟಕ ಹೇಳಿಕೆಗೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ.

ಹೌದು, ಗುರುವಾರ ರಾಮದುರ್ಗ ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ಯತ್ನಾಳ್, ದೆಹಲಿಯಿಂದ ನಮ್ಮ ರಾಜ್ಯಕ್ಕೆ ಬಂದ ಕೆಲ ವ್ಯಕ್ತಿಗಳು ನಾವು ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೀವಿ, ಆದ್ರೆ ನೀವು 2500 ಕೋಟಿ ರೂ. ರೆಡಿ ಮಾಡಿ ಇಡಿ ಅಂತ ಹೇಳಿದ್ದರು. ನನಗೆ ದೆಹಲಿಗೆ ಹೋಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ(Sonia Gandhi), ಬಿಜೆಪಿ ರಾಷ್ಟ್ರಧ್ಯಕ್ಷ ಜೆಪಿ ನಡ್ಡಾ(JP Nadda) ಅವರನ್ನು ಭೇಟಿ ಮಾಡಿಸ್ತಿನಿ ಅಂತೆಲ್ಲಾ ಹೇಳಿದ್ರು, ನನ್ನ ಬಳಿ ಬಂದು ನಿಮ್ಮನ್ನು ಮುಖ್ಯಮಂತ್ರಿ ಮಾಡಿಸುವ ಜವಾಬ್ದಾರಿ ನಮ್ಮದು. ಆದ್ರೆ ನೀವು 2500 ಕೋಟಿ ರೆಡಿ ಮಾಡಿ ಎಂದು ಹೇಳಿದರು.

ದಯವಿಟ್ಟು ರಾಜಕಾರಣದಲ್ಲಿ ಯಾರೂ ಮೋಸ ಹೋಗಬೇಡಿ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ಇದಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡವು. ಬಸವನಗೌಡ ಯತ್ನಾಳ್ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕರಿಂದ ಅನುಮಾನಸ್ಪದ ಪ್ರಶ್ನೆಗಳು ಉದ್ಬವಗೊಂಡಿತು. ಈ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಬಿಜೆಪಿ ಪಕ್ಷದ ವಿರುದ್ಧ ಸಿಡಿದೆದಿದ್ದು, ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಹೇಳಿಕೆಯಲ್ಲೇ ತಿಳಿಯುತ್ತಿದೆ ಇದು ಪೇಮೆಂಟ್ ಸಿಎಂ ಸೀಟ್ ಎಂಬುದು.

ಯತ್ನಾಳ್ ಈ ಹಿಂದೆಯೂ ಇಂಥ ಅನೇಕ ಆರೋಪಗಳನ್ನು ಬಹಿರಂಗಪಡಿಸಿದ್ದಾರೆ. ಆದ್ರೆ, ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ! ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳ ಭ್ರಷ್ಟಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ. ಸದ್ಯ ಈಗ ಸಿಎಂ ಸೀಟ್‍ಗೆ 2500 ಕೋಟಿ ರೂ. ಬೇಡಿಕೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಯಾಕೆ ಹೈಕಮಾಂಡ್ ಈ ಬಗ್ಗೆ ಮೌನ ತಾಳಿದೆ? ಈ ಮೌನ ಇದಕ್ಕೆಲ್ಲಾ ಪರೋಕ್ಷ ಒಪ್ಪಿಗೆ ಸೂಚನೆಯಾ? ಎಂದು ಪ್ರಶ್ನಿಸಿದ್ದಾರೆ.

Exit mobile version