Bengaluru: ಇಸ್ರೇಲ್ (Israel) ಹಾಗೂ ಹಮಾಸ್ ಉಗ್ರರ ನಡುವೆ ಯುದ್ಧ ಮುಂದುವರೆದಿದ್ದು, ಇಸ್ರೇಲ್ (silent protest in Church Street) ದಾಳಿಗೆ 9870ಕ್ಕೂ ಹೆಚ್ಚು ಪ್ಯಾಲೆಸ್ತೀನ್
ನಾಗರಿಕರು ಬಲಿಯಾಗಿದ್ದಾರೆ. ಸಾವಿರಾರು ಪ್ಯಾಲೆಸ್ತೀನ್ ನಾಗರಿಕರು ಗಾಯಗೊಂಡಿದ್ದಾರೆ. ಭಾನುವಾರ (ನ.05) ಸಂಜೆ ಚರ್ಚ್ ಸ್ಟ್ರೀಟ್ನಲ್ಲಿ (Church Street) 100 ಕ್ಕೂ ಹೆಚ್ಚು ಜನರು ಪ್ಯಾಲೆಸ್ತೀನ್ಗೆ
ಬೆಂಬಲ ಸೂಚಿಸಿ ಭಿತ್ತಿಪತ್ರಗಳು ಮತ್ತು ಫಲಕಗಳನ್ನು(silent protest in Church Street) ಪ್ರದರ್ಶಿಸಿ ಮೌನ ನಡಿಗೆ ನಡೆಸಿದರು.
ಪ್ಯಾಲೆಸ್ತೀನ್ಗೆ (Palestine) ಬೆಂಬಲ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ಮೌನ ಪ್ರತಿಭಟನೆಗಳು ನಡೆಯುತ್ತಿದ್ದು, ಹೋರಾಟಗಾರರು ಪೋಸ್ಟರ್ಗಳಲ್ಲಿ ಕಲ್ಲಂಗಡಿಗಳ ಚಿತ್ರಗಳನ್ನು ಪ್ರದರ್ಶಿಸಿದರು.
ಪ್ಯಾಲೆಸ್ತೀನ್ ಧ್ವಜದ ಬಣ್ಣಕ್ಕೆ ಸಾಂಕೇತಿಕವಾಗಿ ಕಲ್ಲಂಗಡಿ ಹಣ್ಣಿನ್ನು ಪ್ರದರ್ಶಿಸಿ “ಕಲ್ಲಂಗಡಿಯನ್ನು ಮುಕ್ತಗೊಳಿಸಿ” ಎಂಬ ಸಂದೇಶದೊಂದಿಗೆ ಮೌನ ಪ್ರತಿಭಟನೆ ಮಾಡಲಾಯಿತು.
ಕೆಲ ದಿನಗಳ ಹಿಂದೆ ಮುಸ್ಲಿಂಗಳ (Muslim) ವಿರುದ್ಧ ದಾಳಿ ನಿಲ್ಲಿಸಿ, ಪ್ಯಾಲೆಸ್ತೀನ್ ಬೆಂಬಲಿಸಿ ಎಂದು ಎಂಜಿ ರಸ್ತೆಯಲ್ಲಿ ನೂರಾರು ಜನರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ದರು.
ಇದೀಗ ಮತ್ತೆ ಭಾನುವಾರ ಕೂಡ ನೂರಾರು ಮಂದಿ ಮೌನ ನಡಿಗೆ ಮೂಲಕ ಪ್ಯಾಲೆಸ್ತೀನ್ ಬೆಂಬಲಕ್ಕೆ ನಿಂತಿದ್ದಾರೆ.
ಸೇಂಟ್ ಮಾರ್ಕ್ಸ್ (St.Mark’s) ರಸ್ತೆಯ ಬಳಿ ಪೆಟ್ರೋಲ್ ಬಂಕ್ ಮೂಲಕ ಹಾದು ಹೋಗುತ್ತಿದ್ದಾಗ, ಬಿಳಿ ಅಂಗಿ ಧರಿಸಿದ ವ್ಯಕ್ತಿಯೊಬ್ಬರು ಘೋಷಣೆ ಕೂಗಿದ್ದು, “ದೇಶದ್ರೋಹಿ ನಾಯಿಗಳಿಗೆ ಧಿಕ್ಕಾರ
(ದೇಶ ವಿರೋಧಿ ನಾಯಿಗಳನ್ನು ಖಂಡಿಸಿ) ಎಂದರು.
ಎಂಜಿ ರಸ್ತೆಯ ಮೆಟ್ರೋ (Metro) ನಿಲ್ದಾಣದ ಚರ್ಚ್ ಸ್ಟ್ರೀಟ್ ಬಳಿ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ನೂರಾರು ಮಂದಿ ಜಮಾಯಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಬೀದಿಯಲ್ಲಿ ಮೆರವಣಿಗೆ
ನಡೆಸಿದರು. ಅವರಲ್ಲಿ ಕೆಲವರು ತಮ್ಮ ಪೋಸ್ಟರ್ಗಳಲ್ಲಿ (Posters) ಕಲ್ಲಂಗಡಿ ಹಣ್ಣಿನ ಹಿಂದಿನ ಸಂದೇಶ ಜನರಿಗೆ ಮುಟ್ಟಲಿ ಎಂಬ ಉದ್ದೇಶದಿಂದ ಸ್ವಲ್ಪ ಸಮಯ ನಿಂತು ಮುಂದೆ ಸಾಗಿದರು.
ಇನ್ನು ಈ ಹೋರಾಟ ಯಾರಿಂದಲೂ ಯೋಜಿಸಲ್ಪಟ್ಟಿಲ್ಲ ಅಥವಾ ಸಂಘಟಿತವಾಗಿಲ್ಲ. ನಾವೆಲ್ಲರೂ ಸಾಮಾಜಿಕ ಮಾಧ್ಯಮ ಮತ್ತು ನಮ್ಮ ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇವೆ, ಪ್ಯಾಲೆಸ್ತೀನ್ಗೆ ಬೆಂಬಲ ಸೂಚಿಸುವ
ಕಾರಣಕ್ಕೆ ಒಗ್ಗಟ್ಟಿನ ಪ್ರದರ್ಶನವಾಗಿ ಚರ್ಚ್ ಸ್ಟ್ರೀಟ್ನಲ್ಲಿ ಶಾಂತಿಯುತ ನಡಿಗೆಯನ್ನು ನಡೆಸಿದ್ದೇವೆ ಎಂದು ಹೋರಾಟಗಾರರೊಬ್ಬರು ತಿಳಿಸಿದರು. ಆದರೆ ಹೋರಾಟಗಾರರು ಯಾವುದೇ
ಘೋಷಣೆಗಳನ್ನು ಕೂಗದೆ ಮೌನಾಚರಣೆ ಮೂಲಕ ಭಿತ್ತಿಚಿತ್ರ ಪ್ರದರ್ಶಿಸಿ ಮೆರವಣಿಗೆಯನ್ನು ಮಾಡಿದರು.
ಇದನ್ನು ಓದಿ: ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು ಮಾಡಿದ ಬಿಬಿಎಂಪಿ: ವ್ಯಾಪಾರಿಗಳ ವಿರೋಧ
- ಭವ್ಯಶ್ರೀ ಆರ್ ಜೆ