Karnataka: ಹೋಟೆಲ್ (Hotel) ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರವು ವಿವಿಧ ನಿಗಮಗಳ ಮೂಲಕ ಅನುಷ್ಠಾನಗೊಳಿಸಿರುವ (subsidy for hotel Business – Kar Govt) ಸಾಲ ಮತ್ತು ಸಹಾಯಧನ
ವಿತರಣೆಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಹೇಗೆ ಅರ್ಜಿ ಸಲ್ಲಿಸಬೇಕು (subsidy for hotel Business – Kar Govt) ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಸುಮಾರು ಜನರಿಗೆ ಹೋಟೆಲ್ ಉದ್ಯಮ ಇಂದು ಬದುಕು ಕಲ್ಪಿಸಿದ್ದು, ಬೀದಿ ಬದಿಯ ಸಣ್ಣ ಪುಟ್ಟ ಹೋಟೆಲ್ ಗಳಿಂದ ಹಿಡಿದು ದೊಡ್ಡ ದೊಡ್ಡ ಫೈವ್ ಸ್ಟಾರ್ (Five Star) ಹೋಟೆಲ್ಗಳವರೆಗೂ ಈ
ಉದ್ಯಮ ಬೆಳೆದು ನಿಂತಿದೆ. ಎಷ್ಟೇ ಬಂಡವಾಳ ಹಾಕಿದರೂ ಈ ಉದ್ಯಮಕ್ಕೆ ಪ್ರತಿಸ್ಪರ್ಧಿ ಅಥವಾ ಶ್ರಮಕ್ಕೆ ಮೋಸವಿಲ್ಲದ ಕ್ಷೇತ್ರ ಇದಾಗಿದೆ.
ಯಾವ ನಿಗಮಗಳಿಂದ ಸೌಲಭ್ಯ?
ಈ ಉದ್ಯಮದಲ್ಲಿ ತಮನೆಂದೇ ಛಾಪು ಮೂಡಿಸಿರುವ ಪರಿಣಿತಿ ಹಾಗು ಪಾಕ ಪ್ರತಿಭೆ ಹೊಂದಿರುವ ವೀರಶೈವ ಲಿಂಗಾಯತರು ಹಾಗೂ ಮರಾಠರಿಗೆ ಈ ಯೋಜನೆ ಅನ್ವಯಗೊಳ್ಳಲಿದ್ದು, ಈ ಸಮುದಾಯದ
ಆಸಕ್ತರಿಗೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮರಾಠಿ (Marathi) ಸಮುದಾಯಗಳ ಅಭಿವೃದ್ಧಿ ನಿಗಮಗಳು ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲು ಅರ್ಜಿ
ಕರೆಯಲಾಗಿದೆ.
ಎಷ್ಟು ಸಹಾಯಧನ?
ಈ ಉದ್ಯಮ ಮಾಡಲು ಘಟಕ ವೆಚ್ಚ 5 ಲಕ್ಷ ರೂಪಾಯಿಗಳಾಗಿದ್ದು, ಇದರಲ್ಲಿ 4,60,000 ರೂಪಾಯಿ ಸಾಲ ಮತ್ತು ೪೦,೦೦೦ ರೂಪಾಯಿ ಸಹಾಯಧನ ನೆರವು ನೀಡಲಾಗುತ್ತಿದ್ದು, ಇನ್ನು ಬ್ಯಾಂಕ್ಗಳು
ನಿಗಧಿಪಡಿಸುವ ಕಂತುಗಳನ್ವಯ ಸಲ ಮತ್ತು ಬಡ್ಡಿಯನ್ನು ಬ್ಯಾಂಕ್ಗಳಿಗೆ ಮರುಪಾವತಿ ಮಾಡಬೇಕು. ಹೋಟೆಲ್ ಶುರುಮಾಡಲು ಫಲಾನುಭವಿಗಳು ತಮ್ಮ ಸ್ವಂತ ಹೆಸರಿನಲ್ಲಿ ಕನಿಷ್ಠ 20×30 ಅಡಿ
ಅಳತೆಯ ಜಾಗ ಹೊಂದಿರಬೇಕು.
ಲಿಂಗಾಯತರ ಖಾನಾವಳಿ ಯೋಜನೆ?
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವು ಸಾಲ ಹಾಗೂ ಸಹಾಯಧನ ಒದಗಿಸಲು ಭೋಜನಾಲಯ ಕೇಂದ್ರ ಅಥವಾ ಲಿಂಗಾಯತರ ಖಾನಾವಳಿ ಹೆಸರಿನಲ್ಲಿ ಆರಂಭಿಸಬೇಕು.
ಆದಾಯ ಮಿತಿ
ಆಸಕ್ತ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದಲ್ಲಿ 28000 ರೂಪಾಯಿ ಮತ್ತು ನಗರ ಪ್ರದೇಶದವರಿಗೆ 1,20,000 ರೂಪಾಯಿ ಮೀರಿರಬಾರದು.
ಅರ್ಜಿದಾರರ ವಯೋಮಿತಿ:
ಅರ್ಜಿದಾರರ ವಯಸ್ಸು ಕನಿಷ್ಠ 18 ಹಾಗು ಗರಿಷ್ಠ 55 ವಯೋಮಿತಿ ಹೊಂದಿರಬೇಕು ಮತ್ತು ಕರ್ನಾಟಕದವರಾಗಿರಬೇಕು ಹಾಗು ಖಾಯಂ ವಿಳಾಸವು ರಾಜ್ಯದಲ್ಲಿರಬೇಕು.
ಅರ್ಜಿ ಸಲ್ಲಿಸುವುದು
ಈ ಸೌಲಭ್ಯವನ್ನು ಪಡೆಯಲು ಇಚ್ಛಿಸುವ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ http://sevasindhu.karnataka.gov.in ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಮತ್ತು
ಕರ್ನಾಟಕ ಜನ ಸೇವಾ ಕೇಂದ್ರಗಳಲ್ಲಿ ಆನ್ಲೈನ್ (Online) ಅರ್ಜಿ ಹಾಕಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸಹಾಯವಾಣಿ ಸಂಖ್ಯೆ: 080-22865522, 9900012351 ಸಂಪರ್ಕಿಸಬಹುದು.
ಇದನ್ನು ಓದಿ: ರೈಲು ದುರಂತ: ಬಿಹಾರದಲ್ಲಿ ಹಳಿ ತಪ್ಪಿದ ದೆಹಲಿ-ಗುವಾಹಟಿ ಮಾರ್ಗದ ಈಶಾನ್ಯ ಎಕ್ಸ್ಪ್ರೆಸ್ ರೈಲು
- ಭವ್ಯಶ್ರೀ ಆರ್.ಜೆ