ಟ್ಯಾಂಕರ್ ಬಿಗ್ ಫೈಟ್‌ !!

ಮಂಗಳೂರಿನ ತಣ್ಣೀರು ಬಾವಿಯ ಬಳಿ ಇಂಧನ ಟ್ಯಾಂಕರ್‌ ಮಾಲೀಕರಾದ ಜನಾರ್ಧನ ಪೂಜಾರಿ, ಕಿರಣ್‌ ಹಾಗೂ ಅಗಸ್ಟಿನ್‌ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಅವರ ಕಾರಿನ ಗಾಜನ್ನು ಪುಡಿ ಮಾಡಿದ್ರು.

Tanker Fighting in Mangalore. Tanker owners were attacked by some other truck owners for business in Tanniru Bavi, Mangalore, Dakshina Kannada District. 

ಟ್ಯಾಂಕರ್ ಬಿಗ್ ಫೈಟ್‌ !! ಮಂಗಳೂರಿನ ತಣ್ಣೀರು ಬಾವಿಯ ಬಳಿ ಇಂಧನ ಟ್ಯಾಂಕರ್‌ ಮಾಲೀಕರಾದ ಜನಾರ್ಧನ ಪೂಜಾರಿ, ಕಿರಣ್‌ ಹಾಗೂ ಅಗಸ್ಟಿನ್‌ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಅವರ ಕಾರಿನ ಗಾಜನ್ನು ಪುಡಿ ಮಾಡಿದ್ರು. ಈ ಘಟನೆಗೆ ಕಾರಣ ಏನು ಗೊತ್ತಾ? ನಾಯರ್‌ ಎನರ್ಜಿ ಕಂಪೆನಿ ತನ್ನ ಡೀಸೆಲ್‌, ಪೆಟ್ರೋಲನ್ನು ಸಾಗಿಸಲು ಡೀಲರ್‌ಗಳಿಗೆ ಆಪ್‌ ಮೂಲಕ ಟ್ಯಾಂಕರಗಳನ್ನು ಆಯ್ಕೆ ಮಾಡಲು`ನಿಮ್ಸ್‌’ ಆಪ್‌ ಮೂಲಕ ಅವಕಾಶ ನೀಡಿತ್ತು. ಇದರಿಂದ ಯಾರು ಪ್ರಾಮಾಣಿಕವಾಗಿ ಇಂಧನವನ್ನು ಡೀಲರ್‌ಗೆ ಸಾಗಿಸ್ತಾರೋ ಅವರಿಗೆ ಹೆಚ್ಚು ಅವಕಾಶ ಸಿಗುತ್ತಿತ್ತು. ಇದರಿಂದ ನಷ್ಟ ಅನಿಭವಿಸಿದ ಇತರೆ ಟ್ಯಾಂಕರ್‌ ಮಾಲೀಕರು  ಆಪ್‌ ರದ್ದುಪಡಿಸಿ ಸೀರಿಯಲ್ ಮೂಲಕ ಟ್ಯಾಂಕರ್‌ಗಳಿಗೆ ಇಂಧನ ತುಂಬಲು ಅವಕಾಶ ಕೊಡಬೇಕು ಅಂತ ಒತ್ತಾಯ ಪ್ರಾರಂಭಿಸಿದ್ರು. ಆದ್ರೆ ಇದಕ್ಕೆ ಕೆಲ ಟ್ಯಾಂಕರ್‌ ಮಾಲೀಕರು ಒಪ್ಪದೆ ಆಪ್‌ ಮೂಲಕವೇ ಸಾಗಿಸಲು ಸಹಮತ ವ್ಯಕ್ತಪಡಿಸಿದ್ರು. ಇದರಿಂದ ಆಕ್ರೋಶಿತರಾದ ದಕ್ಷಿಣ ಕನ್ನಡ ಮತ್ತು ಉಡುಪಿ ಟ್ಯಾಂಕ್‌ ಟ್ರಕ್‌ ಮಾಲೀಕರ ಸಂಘದ ಕೆಲ ಸದಸ್ಯರು ಆಪ್‌ ವ್ಯವಸ್ಥೆಗೆ ಒಪ್ಪಿದ ಟ್ಯಾಂಕ್‌ ಮಾಲೀಕರಾದ ಜನಾರ್ಧನ ಪೂಜಾರಿ, ಕಿರಣ್‌ ಹಾಗೂ ಅಗಸ್ಟಿನ್‌ ಮೇಲೆ ಹಲ್ಲೆ ಮಾಡಿ ಅವರ ವಾಹನವನ್ನು ಜಖಂಗೊಳಿಸಿದ್ರು. ದುರಂತ ಅಂದ್ರೆ ಮಂಗಳೂರಿನ ಪೊಲೀಸರು ಹಲ್ಲೆಗೊಳಗಾದವರ ವಿರುದ್ಧವೇ ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ. ಇದರ ಹಿಂದೆ ಜನಪ್ರತಿನಿಧಿಗಳ ಕೈವಾಡ ಇದೆ ಅನ್ನೋದು ಹಲ್ಲೆಗೊಳಗಾದವರ ಆರೋಪ.

Exit mobile version