ಪೊಲೀಸರನ್ನು ತಾಲಿಬಾನ್‌ಗಳಿಗೆ ಹೋಲಿಸಿದ ಟಿಕಾಯತ್‌

ದೆಹಲಿ ಆ 30 : ಹರಿಯಾಣದ ಮುಖ್ಯಮಂತ್ರಿ ಕರ್ನಾಲ್ ಭೇಟಿ ವಿರೋಧಿಸಿ ರೈತರು ಪ್ರತಿಭಟನೆ ಮಾಡಿದ್ದು, ಈ ಸಂಧರ್ಭದಲ್ಲಿ ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಈ ಲಾಠಿ ಪ್ರಹಾರವನ್ನು ಖಂಡಿಸಿರುವ ಭಾರತೀಯ ಕಿಸಾನ್‌ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ದೇಶವನ್ನು ಸರ್ಕಾರಿ ತಾಲಿಬಾನ್‌ಗಳು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಕಾಯತ್ ಕೇಂದ್ರ ಮತ್ತು ಹರಿಯಾಣ ಸರ್ಕಾರಗಳು ತಾಲಿಬಾನ್‌ ನೀತಿಯನ್ನು ಅನುಸರಿಸುತ್ತಿದ್ದಾವೆ ಎಂದ ಅವರು ದೇಶದಲ್ಲಿ ಸರ್ಕಾರಿ ತಾಲಿಬಾನ್​​ ಕಮಾಂಡರ್​ಗಳು ಇದ್ದಾರೆ. ಆ ಕಮಾಂಡರ್​ಗಳನ್ನು ಮೊದಲು ಗುರುತಿಸಬೇಕು. ಪ್ರತಿಭಟನಾಕಾರರ ತಲೆ ಒಡೆಯಿರಿ ಎಂದು ಹೇಳುವವರೂ ಕೂಡ ಅದೇ ಸರ್ಕಾರಿ ತಾಲಿಬಾನ್​​ನ ಕಮಾಂಡರ್​ಗಳೇ ಆಗಿದ್ದಾರೆ ಎಂದು ಹೇಳಿದ್ದಾರೆ. ನಿನ್ನೆ ಪ್ರತಿಭಟನಕಾರರ ತಲೆ ಒಡೆಯಿರಿ ಎಂದು ಅವರು ಹೇಳಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲೆ ರಾಕೇಶ್‌ ಟಿಕಾಯತ್‌ ಪೊಲೀಸರನ್ನು ಮತ್ತು ಬಿಜೆಪಿ ನಾಯಕರನ್ನು ತಾಲಿಬಾನಿಗಳಿಗೆ ಹೋಲಿಸಿದ್ದಾರೆ.

Exit mobile version