Bengaluru: ಕಾವೇರಿ ನದಿ (Kaveri River) ಕನ್ನಡಿಗರ ಪಾಲಿಗೆ ಜೀವನದಿ, ಹೀಗಾಗಿ (TN Against Karnataka) ಕಾವೇರಿ ನದಿಯನ್ನು ಕನ್ನಡಿಗರು ಪೂಜಿಸುತ್ತಾರೆ. ಹೀಗೆ ಕನ್ನಡ ನಾಡಿನಲ್ಲಿ ಹುಟ್ಟಿ,
ನೂರಾರು ಕಿಲೋ ಮೀಟರ್ ದೂರಕ್ಕೂ ಹರಿಯುತ್ತಾ, ಕೋಟ್ಯಂತರ ಜೀವಗಳ ದಾಹ ನೀಗಿಸುವ ಕಾವೇರಿ ನೀರಿನ ವಿಚಾರದಲ್ಲಿ ಮತ್ತೆ ಕ್ಯಾತೆ ಮುಂದುವರಿದಿದೆ. ಅದರಲ್ಲೂ ಮಳೆ ಬೀಳದ ಸಮಯದಲ್ಲಿ
ತಮಿಳುನಾಡು ಸರ್ಕಾರ (Tamilnadu Government), ಮತ್ತೊಮ್ಮೆ ಕಾವೇರಿ ನೀರಿಗಾಗಿ ದೊಡ್ಡ ಕಿರಿಕ್ ತೆಗೆದಿದೆ. ಈ ಮೂಲಕ ಕಾವೇರಿ ನೀರಿಗಾಗಿ ರಾಜಕೀಯ ಮುಂದುವರಿದಿದೆ.
ಭೀಕರ ಬರದಲ್ಲಿ ಕನ್ನಡ ನಾಡು ಪರದಾಡುವ ಸಮಯದಲ್ಲಿ ತಮಿಳುನಾಡು ಸರ್ಕಾರ ಮಾತ್ರ, 2.5 ಟಿಎಂಸಿ (TMC) ನೀರು ಬಿಡಿ ಎಂದು ಬೇಡಿಕೆ ಇಟ್ಟಿದೆ.
ಅಷ್ಟೇ ಅಲ್ಲದೇ ಕರ್ನಾಟಕಕ್ಕೆ (Karnataka) ಕುಡಿಯುವುದಕ್ಕೆ 0.5 ಟಿಎಂಸಿ ನೀರು ಸಾಕು, ಕುಡಿಯುವ ನೀರಿನ ನೆಪ ಹೇಳಿ ನೀರು ಬಿಡುಗಡೆಗೆ ನಿರಾಕರಿಸಬಾರದೆಂದು ಸಭೆಯಲ್ಲಿ ವಾದಿಸಿದೆ.ಮಳೆಯ
ಕೊರತೆ ಕಾರಣ ನೀಡಿ ಕರ್ನಾಟಕ ಸುಪ್ರೀಂಕೋರ್ಟ್ (Supreme Court) ಆದೇಶ ಪಾಲನೆ ಮಾಡಿಲ್ಲ, ನಿಗಧಿತ ಪ್ರಮಾಣದ ನೀರು ಹರಿಸಿಲ್ಲ. ಫೆ.1 ರಿಂದ ಏಪ್ರಿಲ್ (April) 28 ವರೆಗೂ ಪರಿಸರಕ್ಕೆ
7.33 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ಕರ್ನಾಟಕ 5.31 ಟಿಎಂಸಿ ನೀರು ಮಾತ್ರ ಹರಿಸಿದೆ (TN Against Karnataka) ಇದರಲ್ಲೂ 2.016 ಟಿಎಂಸಿ ಬಾಕಿ ಉಳಿಸಿಕೊಂಡಿದೆ.
ಇನ್ನು ತಮಿಳುನಾಡಿನ (Tamilnadu) ಮೆಟ್ಟೂರಿನಲ್ಲಿ 20 ಟಿಎಂಸಿ ಮಾತ್ರ ನೀರಿದೆ. ಕುಡಿಯಲು & ಪರಿಸರಕ್ಕೆ ಆ ನೀರನ್ನ ಬಳಸಲಾಗುತ್ತಿದೆ. ಬಾಕಿ ಉಳಿದ ನೀರನ್ನು ಕರ್ನಾಟಕ ರಿಲೀಸ್ ಮಾಡಲಿ ಅಂತ
ಈಗ ತಮಿಳುನಾಡು ಸರ್ಕಾರ ತಮ್ಮ ಅಧಿಕಾರಿಗಳ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮನವಿ ಸಲ್ಲಿಸಿದೆ. ಹೀಗೆ 2 ರಾಜ್ಯಗಳ ನಡುವೆ ಸಭೆಯಲ್ಲಿ ಸಮನ್ವಯತೆ ಮೂಡದ ಕಾರಣಕ್ಕೆ, ಮೇ
(May) 16 ಕ್ಕೆ ಮತ್ತೊಂದು ಸುತ್ತಿನ ಸಭೆಯನ್ನ ನಡೆಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇದನ್ನು ಓದಿ: ಮೋದಿ ಭಾಷಣವನ್ನು ತಿರುಚಿ ಅಪ್ಲೋಡ್: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ದೂರು ದಾಖಲು