ದಾಳಿಂಬೆ ಹಣ್ಣಿನ ನಿತ್ಯ ಸೇವನೆಯಿಂದ, ಮಾನಸಿಕ ಒತ್ತಡ ಹಾಗೂ ನರಗಳ ದೌರ್ಬಲ್ಯದ ಸಮಸ್ಯೆಗೆ ಪರಿಹಾರವನ್ನು ಕಾಣಬಹುದು. ಇದು ಅತಿಯಾದ ಬಾಯಾರಿಕೆಯನ್ನು ನಿವಾರಣೆ ಮಾಡುತ್ತದೆ ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ.
ದಾಳಿಂಬೆ ಜ್ಯೂಸ್ಗೆ ಜೇನು ತುಪ್ಪವನ್ನು ಸೇರಿಸಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದಾಳಿಂಬೆಯ ಚಿಗುರೆಲೆಗಳನ್ನು ಜಜ್ಜಿ ರಸ ತೆಗೆದು ಕುಡಿದರೆ ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಧೀರ್ಘಕಾಲದ ಆಮಶಂಕೆ ಕಾಯಿಲೆಗೆ ದಾಳಿಂಬೆ ಚಿಗುರೆಲೆಯ ರಸ ರಾಮಬಾಣವಾಗಿ ಕೆಲಸ ಮಾಡುತ್ತದೆ. ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಮೂತ್ರಕೋಶದ ಕಾಯಿಲೆಗಳು ದೂರವಾಗುತ್ತವೆ.
.