New Delhi: ಕೇಂದ್ರ ಸರ್ಕಾರ ವಿಪಕ್ಷ ನಾಯಕರ ಪೋನ್ (Warning Message from Apple) ಕರೆಗಳನ್ನು ಕದ್ದಾಲಿಕೆ ಮಾಡುತ್ತಿದೆ. ಹೀಗಾಗಿಯೇ ಅನೇಕ ವಿಪಕ್ಷ ನಾಯಕರಿಗೆ ಆಪಲ್
ಪೋನ್ನಿಂದ (Apple Phone) ಎಚ್ಚರಿಕೆ ಸಂದೇಶ ಬಂದಿವೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ
ವೈಷ್ಣವ್ (Ashwini Vaishnav), ಆಪಲ್ನಿಂದ ವಿಶ್ವದ 150 ದೇಶಗಳ ಜನರಿಗೆ ಈ ರೀತಿಯ ಎಚ್ಚರಿಕೆ ಸಂದೇಶ ಬಂದಿದೆ.
ಇದು ಭಾರತದಲ್ಲಿ ಮಾತ್ರ ನಡೆದಿಲ್ಲ. ಐಫೋನ್ಗೆ ಹ್ಯಾಕಿಂಗ್ (iPhone Hacking) ಸಂದೇಶ ಬಂದಿರುವ ತಾಂತ್ರಿಕ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ
ಎಂದು ಅವರು ಹೇಳಿದ್ದಾರೆ. ವಿಪಕ್ಷ ನಾಯಕ ಆರೋಪದ ಹಿನ್ನಲೆ ಮಾದ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಪಕ್ಷ ನಾಯಕರು ಹಾಗೂ ಸಂಸದರು ಆಪಲ್ನಿಂದ ಕದ್ದಾಲಿಕೆಯ ಎಚ್ಚರಿಕೆ ಸಂದೇಶ
ಬಂದಿದೆ ಎಂದು (Warning Message from Apple) ಆರೋಪಿಸಿದ್ದಾರೆ.
ಆ್ಯಪಲ್ ಕಂಪನಿಯಿಂದ (Apple Company) ಭಾರತದಲ್ಲಿ ಇರುವ ವಿಪಕ್ಷ ನಾಯಕರಿಗೆ ಮಾತ್ರ ಇಂತಹ ಸಂದೇಶ ಬಂದಿಲ್ಲ. ಬದಲಿಗೆ ಸುಮಾರು 150 ದೇಶಗಳ ಜನರಿಗೆ ಎಚ್ಚರಿಕೆ ಸಂದೇಶಗಳನ್ನು
ಕಳುಹಿಸಲಾಗಿದೆ. ಈ ಮಧ್ಯೆ ಐಫೋನ್ ಹ್ಯಾಕ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆ್ಯಪಲ್ ಕಂಪನಿಯೇ ಸ್ಪಷ್ಟೀಕರಣವನ್ನು ನೀಡಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವ ಮುನ್ನ ತಾಂತ್ರಿಕ
ವಿಚಾರಗಳ ಬಗ್ಗೆ ಸಾಮಾನ್ಯ ಜ್ಞಾನವನ್ನಾದರೂ ಇಟ್ಟುಕೊಳ್ಳುವುದು ಮುಖ್ಯವಾಗಿದೆ.
ದೇಶದ ಪ್ರಗತಿಯನ್ನು ನೋಡಲು ಬಯಸದ ಕೆಲ ಜನರು ಇಂತಹ ವಿಷಯದಲ್ಲಿ ರಾಜಕೀಯ ಮಾಡುವುದರಲ್ಲಿ ತೊಡಗಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿರುಗೇಟು
ನೀಡಿದರು. ಇನ್ನು ಕಾಂಗ್ರೆಸ್ (Congress) ನಾಯಕ ಶಶಿ ತರೂರ್, ಟಿಎಂಸಿ (TMC) ಸಂಸದೆ ಮಹುವಾ ಮೊಯಿತ್ರಾ, ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಶಿವಸೇನಾದ
ಪ್ರಿಯಾಂಕಾ ಚತುರ್ವೇದಿ (Priyanka Chaturvedi) ಅವರು ತಮ್ಮ ಕರೆಗಳನ್ನು ಕೇಂದ್ರ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ. ಹೀಗಾಗಿಯೇ ಆಪಲ್ ಕಂಪೆನಿಯಿಂದ ನಮಗೆ ಎಚ್ಚರಿಕೆ ಸಂದೇಶ ಬಂದಿರುವುದಾಗಿ
ಹೇಳಿದ್ದರು.
ಇದನ್ನು ಓದಿ: ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಿಸಿದ 4 ಯುವಕರ ಬಂಧನ