ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಚಿನ್ನ ನಕಲಿ ಎಂದ ಬ್ಯಾಂಕ್ ಮ್ಯಾನೇಜರ್, ರೊಚ್ಚಿಗೆದ್ದ ಗ್ರಾಮಸ್ಥರಿಂದ ಬ್ಯಾಂಕ್‌ಗೆ ಮುತ್ತಿಗೆ

ಚನ್ನರಾಯಪಟ್ಟಣ ಸೆ 30 : ಕಷ್ಟಕಾಲಕ್ಕೆ ಚಿನ್ನವನ್ನು ಬ್ಯಾಂಕ್​ನಲ್ಲಿ ಅಡವಿಟ್ಟು ಸಾಲ ಪಡೆದಿದ್ದ ಮಹಿಳೆ  ಚಿನ್ನ ಬಿಡಿಸಿಕೊಳ್ಳಲು ಹೋದಾಗ ಬ್ಯಾಂಕ್​ ಮ್ಯಾನೇಜರ್ ಇದು ನಕಲಿ ಚಿನ್ನ ಎಂದು ಹೇಳಿದ್ದಾರೆ ಈ ಹೇಳಿಕೆಯಿಂದ ಬೇಸತ್ತ ಮಹಿಳೆ ಈ ವಿಷಯವನ್ನು ಮಹಿಳೆ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಬ್ಯಾಂಕ್​ ಮ್ಯಾನೇಜರ್ ಹೇಳಿಕೆಯಿಂದ ರೊಚ್ಚಿಗೆದ್ದ ಸ್ಥಳೀಯರು ಬ್ಯಾಂಕ್​ಗೆ ಮುತ್ತಿಗೆ ಹಾಕಿ, ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿ ತಮ್ಮ ಆಕ್ರೋಶ ವೆಕ್ತಪಡಿಸಿದ್ದಾರೆ.

ಘಟನೆ ವಿವರ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹಿರೇಹಳ್ಲಿ ಗ್ರಾಮದ ಜಯಮ್ಮ ಎಂಬ ಮಹಿಳೆ, ಕಳೆದೊಂದು ವರ್ಷದ ಹಿಂದೆ ಮಗನ ಚಿಕಿತ್ಸೆಗೆಂದು ಹೆಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ 30 ಗ್ರಾಂನ ಮಾಂಗಲ್ಯಸರ ಅಡವಿಟ್ಟು 1 ಲಕ್ಷದ 30 ಸಾವಿರ ರೂಪಾಯಿ ಪಡೆದಿದ್ದರು. ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಹೋದಾಗ ಬ್ಯಾಂಕ್​ ಮ್ಯಾನೇಜರ್ ಇದು ನಕಲಿ ಚಿನ್ನ ಎಂದು ಹೇಳಿದ್ದು ಇದರಿಂದಾಗಿ ಮಹಿಳೆ ಆತಂಕಕ್ಕೆ ಒಳಗಾಗಿದ್ದರು.

Exit mobile version