ಬಿಜೆಪಿ ಜೊತೆ ಮೈತ್ರಿ ಬೇಡ – ವೈಎಸ್‌ವಿ ದತ್ತಾ

ಹೊಸದುರ್ಗ ಆ 31 : ಬಿಜೆಪಿ ಜೊತೆ ಜೆಡಿಎಸ್‌ ರಾಜಿಯಾದರೆ ಅದು ಭವಿಷ್ಯದಲ್ಲಿ ಜೆಡಿಎಸ್‌ ಪಕ್ಷಕ್ಕೆ ಅಪಾಯವಾಗಲಿದೆ ಎಂದು ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತಾ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ.

ಈ ಬಗ್ಗೆ ಹೊಸದುರ್ಗದಲ್ಲಿ ಮಾತನಾಡಿದ ಅವರು ಬಿಜೆಪಿ ಮತ್ತು ಕಾಂಗ್ರೆಸ್‌ ಎರಡು ಪಕ್ಷಗಳು ಹೈಕಮಾಂಡ್‌ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ. ಈಗಾಗಲೇ ಬೆಲೆ ಏರಿಕೆಯಿಂದಾಗಿ ಜನರು ಬೇಸೆತ್ತಿದ್ದಾರೆ. ರಾಜ್ಯದ ವಿಷಯ ಬಂದಾಗ ರಾಷ್ಟ್ರೀಯ ಪಕ್ಷಗಳು  ಧ್ವನಿ ಎತ್ತುತ್ತಿಲ್ಲ. ಜನರ ಆಶೋತ್ತರ ಈಡೇರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಅದ್ದರಿಂದ ರಾಜ್ಯದ ಜನತೆ  ಮುಂದಿನ ಬಾರಿ ಜೆಡಿಎಸ್‌ಗೆ ಬೆಂಬಲಿಸಬೇಕು ಎಂದರು. ಜೊತೆಗೆ ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ನಾವುಗಳು ಹೋರಾಟ ಮಾಡಬೇಕೇ ವಿನಃ ಬಿಜೆಪಿಯೊಂದಿಗೆ ರಾಜಕೀಯವಾಗಿ ರಾಜಿ ಮಾಡಿಕೊಂಡರೆ ಇದು ಜೆಡಿಎಸ್‌ಗೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಅವರು ತಿಳಿಸಿದರು.

Exit mobile version