ಕೆ.ಕಲ್ಯಾಣ್ ದಾಂಪತ್ಯ ಕಲಹದಲ್ಲಿ ಚಿಗುರಿದ ಕನಸು: ವಿಚ್ಛೇಧನ ಅರ್ಜಿ ಹಿಂಪಡೆಯಲು ಮುಂದಾದ ಪತ್ನಿ

ಬೆಂಗಳೂರು: ಕೆಲವು ದಿನಗಳಿಂದ ಹಲವು ತಿರುವು ಪಡೆದಿದ್ದ ಗೀತ ರಚನೆಕಾರ ಕೆ.ಕಲ್ಯಾಣ್ ಅವರ ದಾಂಪತ್ಯ ಕಲಹ ಕೊನೆಗೂ ಮುಗಿಯುವ ಸೂಚನೆ ಕಾಣಿಸುತ್ತಿದೆ. ಕೆ.ಕಲ್ಯಾಣ್ ಅವರ ಪತ್ನಿ ಅಶ್ವಿನಿ ವಿಚ್ಛೇದನ ಕೋರಿ ಕಳೆದ ಜೂನ್ 16ರಂದು ಬೆಳಗಾವಿ ಕೌಟುಂಬಿಕ ಕೋರ್ಟ್ಗೆ ಸಲ್ಲಿಸಿದ್ದರು.

ಆದರೆ ಇದೀಗ ವಿಚ್ಛೇದನ ಕೋರಿ ತಾವು ಸಲ್ಲಿಸಿದ್ದ ಅರ್ಜಿ ಹಿಂಪಡೆಯಲು ಅಶ್ವಿನಿ ಅವರು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಕೌಟುಂಬಿಕ ಕೋರ್ಟ್ಗೆ ತೆರಳಿ ಅರ್ಜಿ ವಾಪಸ್ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸುವ. ಮಾಟ, ಮಂತ್ರದಿಂದಾಗಿ ತಮ್ಮ ದಾಂಪತ್ಯದಲ್ಲಿ ಬಿರುಕು ಉಂಟಾಗಿರುವುದಾಗಿ ಕಲ್ಯಾಣ್ ಹೇಳಿದರು.

ಪತ್ನಿಯ ಖಾತೆಯಿಂದ ಹಣ ತೆಗೆಯಲಾಗಿದೆ ಎಂದು ಕಲ್ಯಾಣ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಶಿವಾನಂದ ವಾಲಿಯನ್ನು ಬಂಧಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ವಿಚ್ಛೇದನದ ಅರ್ಜಿ ವಾಪಸ್ ಪಡೆಯಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.

Exit mobile version