ಕೊವಿಡ್‌ ಮೋಸ; ಆಸ್ಪತ್ರೆಗಳಿಗೆ ನೋಟಿಸ್‌

ಬೆಂಗಳೂರು ಅ.31:  ರಾಜ್ಯದಲ್ಲಿ  ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವ ಕಾರಣ ಸರ್ಕಾರ ಖಾಸಗಿ ಆಸ್ಪತ್ರೆಗಳು ಶೇ. 50 ಹಾಸಿಗಗೆಗಳನ್ನು ಕೊರೋನಾ ಸೋಂಕಿತರಿಗೆ ಮೀಸಲಿಡಬೇಕೆಂದು ಸೂಚನೆ ನೀಡಿತ್ತು. ಆದರೆ ಶೇ 50 ಹಾಸಿಗೆಗಳನ್ನು ಕೋವಿಡ್‌ ಸೋಂಕಿತರಿಗೆ ಮೀಸಲಿಡದ 7 ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದ್ದು, ಶೋಕಾಸ್ ನೋಟಿಸ್ ನೀಡಿದೆ.

ಆರ್ಟ್ಯಮ್ ಆಸ್ಪತ್ರೆ, ರಂಗದೊರೈ ಸ್ಮಾರಕ ಆಸ್ಪತ್ರೆ, ಸಂಜೀವಿನಿ ಆಸ್ಪತ್ರೆ, ಡಾ. ಜಿ ವಿ ಜಿ ಹೆಲ್ತ್‌ಕೇರ್ ಪ್ರೈವೆಟ್ ಲಿಮಿಟೆಡ್, ಶ್ರೀನಿವಾಸ ಆಸ್ಪತ್ರೆ, ಮೆಡ್‌ಸ್ಟಾರ್ ಆಸ್ಪತ್ರೆ, ನಂದನಾ ಹೆಲ್ತ್‌ಕೇರ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಆಸ್ಪತ್ರೆಗಳಿಗೆ ಈಗಾಗಲೇ  ನೋಟಿಸ್ ನೀಡಲಾಗಿದೆ ,ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ಸಾಮಾನ್ಯ ಕೊಠಡಿಗಳು, ತೀವ್ರ ನಿಗಾ ಘಟಕ (ಐಸಿಯು), ಹೈ ಡಿಪೆಂಡೆನ್ಸಿ ಯುನಿಟ್ (ಎಚ್‌ಡಿಯು), ವೆಂಟಿಲೇಟರ್ ಸೌಲಭ್ಯ ಇರುವ ಐಸಿಯುಗಳಲ್ಲಿ ಶೇ 50ರಷ್ಟು ಹಾಸಿಗೆ ಕಾಯ್ದಿರಿಸಬೇಕು ಎಂಬ ಪಾಲಿಕೆ ನಿರ್ದೇಶನವನ್ನು ಈ ಆಸ್ಪತ್ರೆಗಳು ಪಾಲಿಸದೆ ಇರುವ ಕಾರಣ ಈ ಆಸ್ಪತ್ರೆಗಳ ಪರವಾನಗಿ ಅಮಾನತು ಮಾಡಬಾರದೇಕೆ? ಎಂದು ಕಾರಣ ಕೇಳಿ ನೋಟಿಸ್ ನೀಡಲಾಗಿದೆ’ ಎಂದು ವಿವರಿಸಿದ್ದಾರೆ.

24 ಗಂಟೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿ ವಿವರಣೆ ಸಲ್ಲಿಸದೇ ಇದ್ದರೆ ಪರವಾನಗಿ ಅಮಾನತು ಮಾಡಲಾಗುವುದು. ಮೊದಲ ಹಂತದಲ್ಲಿ ಹೊರ ರೋಗಿಗಳ ತಪಾಸಣಾ ವಿಭಾಗ ಮುಚ್ಚಲಾಗುವುದು. ನಂತರ ಒಳರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ಬಾಗಿಲು ಮುಚ್ಚಲಾಗುವುದು’ ಎಂದು ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿ ಬಿಸಿ ಮುಟ್ಟಿಸಿದೆ. ಇತ್ತೀಚೆಗೆ ಯಾವ ರೋಗಿಗಳೇ ಹೋದರೂ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಡಾಕ್ಟರ್ ಇಲ್ಲ ಎಂದು ಹೇಳಿ ರೋಗಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ, ಕೆಲವು ಆಸ್ಪತ್ರೆಯವರು. ಇದರಿಂದ ಅನೇಕ ರೋಗಿಗಳ ಜೀವವೂ ಹೋಗಿದೆ. ಎಂಬುದನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳಬಹುದು.

Exit mobile version