ಚೀನಾ ದಾಳಿ ಪೂರ್ವ ನಿಯೋಜಿತ: ರಾಹುಲ್ ಟೀಕೆ

 

ಕೇಂದ್ರ ಸರ್ಕಾರ ಗಡಿಯಲ್ಲಿ ಸಮಸ್ಯೆ ಇದೆ ಎಂದು ಗೊತ್ತಿದ್ದು ಈ ಬಗ್ಗೆ ಅಸಡ್ಡೆ ತೊರಿದೆ. ಈ ಕಾರಣಕ್ಕೆ ಇಂದು ಯೋಧರ ಬಲಿದಾನವಾಗಿದೆ ಎಂದು ರಾಹುಲ್‍ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಲ್ವನ್ ಕಣಿವೆಯಲ್ಲಿ ಚೀನಾ ಮಾಡಿರುವ ದಾಳಿ ಪೂರ್ವ ನಿಯೋಜಿತ. ಕೇಂದ್ರ ಸರ್ಕಾರ ಚೀನಾ ಗಡಿಯಲ್ಲಿ ಸಮಸ್ಯೆ ಇರುವುದು ಗೊತ್ತಿದ್ದರು ಸುಮ್ಮನೆ ಇದಿದ್ದರಿಂದ ಯೋಧರು ಬೆಲೆ ತೆರಬೇಕಾಗಿದೆ ಎಂದು ಕೇಂದ್ರದ ವಿರುದ್ಧ ಟೀಕಿಸಿ ಟ್ವೀಟ್ ಮಾಡಿದ್ದಾರೆ.

ಜತೆಗೆ ಲಡಾಖ್‍ನ ಗಾಲ್ವನ್ ಕಣಿವೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಇದು ಗಡಿ ಭಾಗದಲ್ಲಿ 5 ದಶಕಗಳಲ್ಲಿ ನಡೆದ ಅತ್ಯಂತ ದೊಡ್ಡ ಸೇನಾ ಘರ್ಷಣೆಯಾಗಿದೆ, ಈ ಘಟನೆ ಗಡಿ ಬಿಕ್ಕಟ್ಟನ್ನ ಇನ್ನಷ್ಟು ತಾರಕಕ್ಕೆ ಏರುವಂತೆ ಮಾಡಿದೆ ಎಂದು ಹೇಳಿದ್ದಾರೆ.

Exit mobile version