ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಜಾಕಿರ್‌ ಸಹೋದರರಿಗಾಗಿ ಶೋಧ ಕಾರ್ಯ

ಬೆಂಗಳೂರು, ಅ.14: ಡಿ.ಜೆ.ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆಯಲ್ಲಿ ಮಾಜಿ ಕಾರ್ಪೋರೇಟರ್ ಜಾಕೀರ್ ಹುಸೇನ್ ಪಾತ್ರ ಇರುವುದು ಬಯಲಾಗಿದೆ.

ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಮಾಜಿ ಕಾರ್ಪೋರೇಟರ್ ಜಾಕೀರ್ ಸೇರಿಕೊಂಡು ತಮ್ಮಅಧಿಪತ್ಯ ಸಾಧಿಸಲು ಅಖಂಡ ಶ್ರೀನಿವಾಸ್ ಮೂರ್ತಿಯನ್ನು ರಾಜಕೀಯವಾಗಿ ಕುಗ್ಗಿಸಲು ಯೋಜನೆ ಮಾಡಿದ್ದರು, ಹೀಗಾಗಿ ಡಿ.ಜೆ. ಹಳ್ಳಿ ಗಲಭೆಯನ್ನು ಮುಂದಿಟ್ಟುಕೊಂಡು ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಸದ್ಯ ಬಂಧನದ ಭೀತಿಯಲ್ಲಿರುವ ಜಾಕೀರ್ ಮತ್ತು ಯಾಸೀರ್ ತಲೆಮರೆಸಿಕೊಂಡಿದ್ದು, ಅರೋಪಿಗಳ ಬಂಧನಕ್ಕೆ ಸಿಸಿಬಿ  ತಂಡ ರಚನೆ ಮಾಡಿ ಶೋಧ ಕಾರ್ಯದಲ್ಲಿ ತೊಡಗಿದೆ.

Exit mobile version