ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆಂಬುಲೆನ್ಸ್ ನ ಕೊರತೆ ಮತ್ತೆ ಶುರುವಾಗಿದೆ. ಸೋಮವಾರ ಆಂಬ್ಯುಲೆನ್ಸ್ ಸಿಗದ ಕಾರಣ ಓರ್ವ ವ್ಯಕ್ತಿ ಫ್ಲೇ ಓವರ್ ಮೇಲೆ ಕುಸಿದು ಬಿದ್ದಿದ್ದಾನೆ. ಆತ ಜ್ವರದಿಂದ ಬಳಲುತ್ತಿದ್ರೂ ಯಾರು ಆತನ ಬಳಿ ಕೋಡ ಹೋಗಲ್ಲಿಲ್ಲ. ತುಮಕೂರು ರಸ್ತೆಯ ಫ್ಲೇ ಓವರ್ ಮೇಲೆ ಈ ಘಟನೆ ನಡೆದಿದೆ. ಪೋಲಿಸರೇ ಕಾಲ್ ಮಾಡಿದ್ದರೂ ಸಹ ಯಾರೂ ಬಂದಿಲ್ಲ. ಆಂಬ್ಯುಲೆನ್ಸ್ ಬರಲು ಹಿಂದೇಟು ಹಾಕಿದೆ .ಇತ್ತ ಈತನ ರಕ್ಷಣೆಗೆ ಪೀಣ್ಯಾ ಪೋಲಿಸರು ಹೊಯ್ಸಳ ವನ್ನು ಅಡ್ಡ ಹಾಕಿ ಕಾಯುತ್ತಿದ್ದರು.
ಕೊರೋನಾ ವೈರಸ್ ದಿನದಿಂದ ದಿನ ಹೆಚ್ಚುತ್ತಲೇ ಇದೆ. ಇದರ ಜೊತೆ ಆಸ್ಪತ್ರೆ, ವೈದ್ಯರು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಕೂಡ ಹೆಚ್ಚಾಗುತ್ತಿದೆ. ಮೊನ್ನೆಯಷ್ಟೇ ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆಯಂದು ಸಿಲಿಕಾನ್ ಸಿಟಿ ಯಲ್ಲಿ ಯಡವಟ್ಟು ಆಗಿತ್ತು. ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡು ಜನ ಸಾಮಾನ್ಯರ ಕೆಂಗಣ್ಣಿಗೆ ರಾಜ್ಯ ಸರ್ಕಾರ ಗುರಿಯಾಗಿದೆ.