Bangalore : ಲೋಕಸಭಾ ಚುನಾವಣೆಯ (Lok Sabha Elections) ನಂತರ ರಾಜ್ಯ ಕಾಂಗ್ರೆಸ್ (State Congress) ಪಕ್ಷಕ್ಕೆ ಇದೀಗ ವಿಧಾನ ಪರಿಷತ್ ಟಿಕೆಟ್ ಹಂಚಿಕೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಏಳು ಸ್ಥಾನಗಳಿಗೆ ಸುಮಾರು 300ಕ್ಕೂ ಅಧಿಕ ನಾಯಕರು ರೇಸ್ನಲ್ಲಿದ್ದಾರೆ. ಯಾರಿಗೆ ಟಿಕೆಟ್ ನೀಡಬೇಕೆಂಬ ನಿರ್ಧಾರಕ್ಕೆ ಬರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ (DK Shivakumar) ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಈ ಗೊಂದಲ ಇದೀಗ ದೆಹಲಿಗೆ ಶಿಫ್ಟ್ ಆಗಿದ್ದು, ಅಲ್ಲಿಯೇ ಟಿಕೆಟ್ ಹಂಚಿಕೆ ನಡೆಯಲಿದೆ. ಹಂಚಿಕೆ ಮಾನದಂಡವನ್ನು ಪಕ್ಷದ ಹೈಕಮಾಂಡ್ ನಾಯಕರೇ ತೀರ್ಮಾನಿಸುತ್ತಾರೆ ಎನ್ನಲಾಗುತ್ತಿದೆ.
ಇನ್ನು ವಿಧಾನ ಪರಿಷತ್ ಟಿಕೆಟ್ ರೇಸ್ನಲ್ಲಿರುವ ಪ್ರಮುಖ ಕಾಂಗ್ರೆಸ್ ನಾಯಕರ ಲಿಸ್ಟ್ ಹೀಗಿದೆ :
ಬೋಸರಾಜು, ಹಾಲಿ ಸಚಿವ (ಮರುಆಯ್ಕೆ)
ಕೆ.ಗೋವಿಂದರಾಜು, ಮರುಆಯ್ಕೆ)
ತೇಜಸ್ವಿನಿಗೌಡ, (ಮರುಆಯ್ಕೆ)
ಬಿ.ಎಲ್.ಶಂಕರ್,ಮಾಜಿ ಸಭಾಪತಿ
ವಿ.ಆರ್.ಸುದರ್ಶನ್,ಮಾಜಿ ಸಭಾಪತಿ
ದಿನೇಶ್ ಅಮೀನ್ ಮಟ್ಟು, ಸಿದ್ದರಾಮಯ್ಯನವರ ಮಾಜಿ ಮಾಧ್ಯಮ ಸಲಹೆಗಾರ
ಕರಡಿ ಸಂಗಣ್ಣ,ಮಾಜಿ ಸಂಸದ
ರಫೀಕ್ ಅಹ್ಮದ್ ಕೈ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ
ಅಬ್ದುಲ್ ಮುನೀರ್ ರಾಜ್ಯ ವಕ್ತಾರ ಕೆಪಿಸಿಸಿ
ಸಂದೀಪ್,AICC ಕಾರ್ಯದರ್ಶಿ
ಮುಂಡರಗಿ ನಾಗರಾಜ್
ವಿಜಯ್ ಮುಳುಗುಂದ
ರಮೇಶ್ ಬಾಬು, ಮಾದ್ಯಮ ವಕ್ತಾರ
ನಟರಾಜ್ ಗೌಡ,ಕಾಂಗ್ರೆಸ್ ವಕ್ತಾರ
ರಾಮಚಂದ್ರಪ್ಪ,BBMP ಮಾಜಿ ಮೇಯರ್
ಮುದ್ದುಗಂಗಾಧರ್, ಮಲ್ಲಿಕಾರ್ಜುನ್ ಖರ್ಗೆ ಆಪ್ತ
ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ
ಸೂರಜ್ ಹೆಗ್ಡೆ
ಕವಿತಾ ರೆಡ್ಡಿ – ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಪುಷ್ಮಾ ಅಮರನಾಥ – KPCC ಮಹಿಳಾ ಘಟಕದ ಅಧ್ಯಕ್ಷೆ
ರಮಾನಾಥ್ ರೈ, ಮಾಜಿ ಸಚಿವ
ವಿನಯ್ ಕಾರ್ತಿಕ್, KPCC ಕಜಾಂಚಿ
ಮನ್ಸೂರ್ ಅಲಿ ಖಾನ್