ಇಂದೂ ಕೂಡ ACB ಅಧಿಕಾರಿಗಳಿಂದ ಮುಂದುವರೆದ ಕಾರ್ಯಾಚರಣೆ

ಬೆಂಗಳೂರು ನ 25: ಬಿಡಿಎ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳ ಪರಿಶೀಲನೆ ಇಂದೂ ಮುಂದುವರೆದಿದ್ದು, ಮೂವರು ಎಸಿಬಿ ಇನ್ಸ್ ಪೆಕ್ಟರ್ ಸೇರಿ ಐವರಿಂದ ಪರಿಶೀಲನೆ ನಡೆಯುತ್ತಿದೆ.

ಎಸಿಬಿ ಅಧಿಕಾರಿಗಳು ಇಂದು ಟೌನ್ ಪ್ಲ್ಯಾನಿಂಗ್ ವಿಭಾಗದ ನಗರ ಯೋಜಕ ಸದಸ್ಯನ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಬಿಡಿಎ ಅಧಿಕಾರಿ N.V.ಧನಂಜಯ ರೆಡ್ಡಿ ಕಚೇರಿಯಲ್ಲಿ ACB ಅಧಿಕಾರಿಗಳು ಪರಿಶೀಲಿನೆ ನಡೆಸುತ್ತಿದ್ದಾರೆ. ಮತ್ತೊಂದು ತಂಡ ಕಂಪ್ಯೂಟರ್ ಸೆಕ್ಷನ್ ನಲ್ಲಿ ದಾಖಲೆಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಕಂಪ್ಯೂಟರ್ ಸೆಕ್ಷನ್ ನಲ್ಲಿ ಇನ್ಸ್ ​​ಪೆಕ್ಟರ್​​ಗಳಾದ ಸಾಧಿಕ್, ರಾಕೇಶ್, ಮಂಜುನಾಥ್ ಟೌನ್ ಪ್ಲ್ಯಾನಿಂಗ್, ಲ್ಯಾಂಡ್ ಅಕ್ವಸಿಷನ್ ಗೆ ಸಂಬಂಧಿಸಿದ ದಾಖಲೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬಿಡಿಎ ವಿರುದ್ಧ ಎಸಿಬಿಗೆ ಹೊಸದಾಗಿ 50 ಕ್ಕೂ ಹೆಚ್ಚು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ದೂರಿನಲ್ಲಿ ನಮೂದಿಸಿರುವ ವಿಷಯಗಳ ಸಂಬಂಧ ಫೈಲ್ ಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇಂದು ಸಂಜೆ 6 ಗಂಟೆಯವರೆಗೂ ಪರಿಶೀಲನೆ ನಡೆಯಲಿದ್ದು, ಇಂದು ಪರಿಶೀಲನೆ ಅಂತ್ಯವಾಗುವ ಸಾಧ್ಯತೆ ಇದೆ. ಎಸಿಬಿ ಅಧಿಕಾರಿಗಳು ಹಲವು ಬಿಡಿಎ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.

Exit mobile version