ಭಾರತೀಯ ಸರ್ವೋಚ್ಚ ನ್ಯಾಯಾಲಯವು ಸಲಿಂಗ ವಿವಾಹವನ್ನು (Same Sex Marriage) ಕಾನೂನುಬದ್ಧಗೊಳಿಸಬೇಕು (Actor Chetan Viral Statement) ಅದನ್ನು ಪಾರ್ಲಿಮಂಟ್ಗೆ
ಮುಂದೂಡಬಾರದು, ಪಾರ್ಲಿಮಂಟ್ ನಿಜವಾದ ನ್ಯಾಯಕ್ಕಿಂತ ಯಥಾಸ್ಥಿತಿ ಅಥವಾ ಹಿಂದುತ್ವದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್
(Chethan) ಅಹಿಂಸಾ (Actor Chetan Viral Statement) ಟೀಕಿಸಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಸಲಿಂಗ ವಿವಾಹವನ್ನು ಸುಪ್ರೀಂ ಕೋರ್ಟ್ (Supreme Court) ಕಾನೂನುಬದ್ಧಗೊಳಿಸಿದ 5 ತಿಂಗಳ ನಂತರ
ನೇಪಾಳವು (Nepal) ಅಧಿಕೃತವಾಗಿ ತನ್ನ ಮೊದಲ ಸಲಿಂಗ ವಿವಾಹವನ್ನು ನೋಂದಾಯಿಸಿಕೊಂಡಿದೆಕ್ಕೆ ವಂದನೆಗಳು. ಭಾರತೀಯ ಸರ್ವೋಚ್ಚ ನ್ಯಾಯಾಲಯವು ಸಲಿಂಗ ವಿವಾಹವನ್ನು
ಕಾನೂನುಬದ್ಧಗೊಳಿಸಬೇಕು.
ಅದನ್ನು ಪಾರ್ಲಿಮಂಟ್ಗೆ ಮುಂದೂಡಬಾರದು, ಪಾರ್ಲಿಮೆಂಟ್ (Parliament) ನಿಜವಾದ ನ್ಯಾಯಕ್ಕಿಂತ ಯಥಾಸ್ಥಿತಿ ಅಥವಾ ಹಿಂದುತ್ವದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ ಒಂದು ರಾಷ್ಟ್ರವು ತನ್ನ
ಅಲ್ಪಸಂಖ್ಯಾತರನ್ನು ಹೇಗೆ ಪರಿಗಣಿಸುತ್ತದೆ ಎಂಬುದರ ಆಧಾರದ ಮೇಲೆ ನಿರ್ಣಯಿಸಬೇಕು: ಲೈಂಗಿಕ ಅಲ್ಪಸಂಖ್ಯಾತರು/ಭಾಷಾ ಅಲ್ಪಸಂಖ್ಯಾತರು/ಧಾರ್ಮಿಕ ಅಲ್ಪಸಂಖ್ಯಾತರು/ಇತ್ಯಾದಿ ಎಂದಿದ್ದಾರೆ.
ಇನ್ನೊಂದು ಪೋಸ್ಟ್ನಲ್ಲಿ ಸಿಎಎ (CAA) ಕಾನೂನಿನ ಕುರಿತು ಕಿಡಿಕಾರಿರುವ ಅವರು, ‘ಸಿಎಎ ಜಾರಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ
CAA — ಮುಸ್ಲಿಮರನ್ನು ಹೊರತುಪಡಿಸಿ ಎಲ್ಲಾ ನೆರೆಯ ದೇಶಗಳ ನಿರಾಶ್ರಿತರಿಗೆ ಪೌರತ್ವವನ್ನು ನೀಡುವ ಕಾನೂನು– ‘ಭಾರತದ ಕಲ್ಪನೆ’ಗೆ ವಿರುದ್ಧವಾಗಿದೆ. ಆದ್ದರಿಂದ, ಸಿಎಎ ಹಿಂದುತ್ವದ ಶಾಸನವಾಗಿದ್ದು,
ಮೂಲಭೂತವಾಗಿ ರಾಷ್ಟ್ರವಿರೋಧಿಯಾಗಿದೆ (ದೇಶದ್ರೋಹಿಯಾಗಿದೆ). ನಾವು 2019 ರಲ್ಲಿ ಮಾಡಿದಂತೆ ಇಂದು ಈ ಕಾನೂನನ್ನು ವಿರೋಧಿಸುವುದನ್ನು ಮುಂದುವರಿಸಬೇಕು ಎಂದಿದ್ದಾರೆ.
ಇದೇ ವೇಳೆ ರಾಜ್ಯ ಪೊಲೀಸರ ನಡೆಯನ್ನು ಟೀಕಿಸಿರುವ ಅವರು, ಎರಡು ದಿನಗಳ ಹಿಂದೆ ರಂಗಶಂಕರದಲ್ಲಿ ಪ್ಯಾಲೆಸ್ತೀನ್ (Palestine) ಪರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬೆಂಗಳೂರು ಪೊಲೀಸರು
ಅನುಮತಿ ನಿರಾಕರಿಸಿದ್ದರು. ಕಲಾತ್ಮಕ, ಒಳಾಂಗಣ ಕಾರ್ಯಕ್ರಮವನ್ನು ಪೊಲೀಸರು ಏಕೆ ನಿಲ್ಲಿಸುತ್ತಿದ್ದಾರೆ? ಸಿದ್ದರಾಮಯ್ಯ (Siddaramaiah) ಸರ್ಕಾರ — ಹಿಂದಿನ ಬಿಜೆಪಿಯಂತೆ (BJP) – ನಮ್ಮ
ಸಭೆ ಮತ್ತು ಅಭಿವ್ಯಕ್ತಿ ಸಾಂವಿಧಾನಿಕ ಹಕ್ಕಗಳನ್ನು ಉಲ್ಲಂಘಿಸುತ್ತಿದೆ. ಈ ಪೋಲೀಸ್ ರಾಜ್ ಅನ್ನು ನಾವು ವಿರೋಧಿಸಲೇಬೇಕು ಎಂದು ಟೀಕಿಸಿದ್ದಾರೆ.
ಇದನ್ನು ಓದಿ: ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ, ಪ್ರಕರಣ ಸಿಐಡಿಗೆ ವರ್ಗಾವಣೆ