ಖೈದಿ ನಂ.56 ಮತ್ತವನ ಗ್ಯಾಂಗು ಓಟು ಕೇಳಲು ಮತ್ತೆ ಬರುತ್ತಿದೆ – ಮೋದಿ ವಿರುದ್ದ ನಟ ಕಿಶೋರ್ ಲೇವಡಿ

ಜಾಗ್ರತೆ .. ನಾಚಿಕೆ ಮಾನ ಮರ್ಯಾದೆಯಿಲ್ಲದೇ ತನ್ನ ಲಕ್ಷಾಂತರ ಕೋಟಿ ಕಳ್ಳತನವನ್ನು ಸರಿಯೆಂದು ಸಾಧಿಸುತ್ತಾ ಖೈದಿ ನಂ. 56 (Khaidi No.56) ಮತ್ತವನ ಗ್ಯಾಂಗು ಓಟು ಕೇಳಲು ಮತ್ತೆ ಬರುತ್ತಿದೆ ಎಂದು ನಟ ಕಿಶೋರ್ (Kishore) ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಸಾಧ್ಯವೇ?? ನಷ್ಟದಲ್ಲಿದ್ದೂ ಇಷ್ಟು ಹಣ ಕೊಡಲು ಹೇಗೆ ಸಾಧ್ಯ ? ಅಂದರೆ ಕಂಪನಿಗಳು ಲಾಭದಲ್ಲಿವೆ .. ನಷ್ಟವೆಂದು ಸುಳ್ಳು ಹೇಳಿ ಎಲೆಕ್ಟೊರಲ್ ಬಾಂಡಿನ (Electoral Bond) ಮುಖಾಂತರ ಖೈದಿ ನಂ.56ರ ಗುಂಪಿಗೆ ಲಂಚ ಕೊಟ್ಟು ತೆರಿಗೆ ಕದಿಯುತ್ತಿವೆ. ನೂರಾರು ಕೋಟಿ ಲಂಚವೇ ಕೊಡಬೇಕೆಂದರೆ ಕದ್ದ ತೆರಿಗೆ ಹಣ ಸಾವಿರಾರು ಕೋಟಿಯಾದರೂ ಇರುವುದಿಲ್ಲವೇ? ಜಾಗ್ರತೆ .. ನಾಚಿಕೆ ಮಾನ ಮರ್ಯಾದೆಯಿಲ್ಲದೇ ತನ್ನ ಲಕ್ಷಾಂತರ ಕೋಟಿ ಕಳ್ಳತನವನ್ನು ಸರಿಯೆಂದು ಸಾಧಿಸುತ್ತಾ ಖೈದಿ ನಂ. 56 ಮತ್ತವನ ಗ್ಯಾಂಗು ಓಟು ಕೇಳಲು ಮತ್ತೆ ಬರುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಇವರು ಕದ್ದ ಆ ಸಾವಿರಾರು ಕೋಟಿ ತೆರಿಗೆ ಹಣ, ನಾವು ನೀವು ದೇಶದ ಒಳಿತಿಗಾಗಿ ಈ ಕಳ್ಳರಿಗೆ ಕೊಟ್ಟ ನಮ್ಮ ತೆರಿಗೆ ಹಣ ನೆನಪಿರಲಿ. ಬಡ ರೈತರಿಗೆ ಸಬ್ಸಿಡಿ ಕೊಟ್ಟಾಗ ಟ್ಯಾಕ್ಸ್ ಪೇಯರ್ (Tax Payer) ಹಣ ಹೋಯ್ತು ಎಂದು ಬೊಬ್ಬೆ ಹೊಡೆಯುವ ನಾವು ಈಗ ಏಕೆ ಮುಚ್ಚಿಕೊಂಡು ಕೂತಿದ್ದೇವೆ? ಅವರ ಕೊರಳ ಪಟ್ಟಿ ಹಿಡಿದು ಲೆಕ್ಕ ಕೇಳಬೇಡವೇ.. ಆ ತೆರಿಗೆ ಹಣದ ಕಳ್ಳ , ಪ್ರಧಾನಿಯೇ ಆದರೂ ?? ಎಂದು ಟೀಕಿಸಿದ್ದಾರೆ.

Exit mobile version