ದ್ವೇಷ ಭಾಷಣಗಳಿಗೆ ಕಿವುಡಾದ, ವಿವಿಪ್ಯಾಟ್ನ (VVPat) ಚೀಟಿಗಳನ್ನು ಎಣಿಸಲು ಯೋಗ್ಯತೆಯಿಲ್ಲದ (Actor Kishore Slams EC) ನಾಲಾಯಕ್ ಚುನಾವಣಾ ಆಯೋಗ ಎಂದು ನಟ ಹಾಗೂ ಸಾಮಾಜಿಕ
ಹೋರಾಟಗಾರ ಕಿಶೋರ್ (Kishore) ಅವರು ಕೇಂದ್ರ ಚುನಾವಣಾ (Actor Kishore Slams EC) ಆಯೋಗದ ವಿರುದ್ದ ನೇರವಾಗಿ ಕಿಡಿಕಾರಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಪ್ರಜಾಪ್ರಭುತ್ವದ ಗುಜರಾತ್ ಮಾಡಲ್ (Gujarat Model) ಇದೋ ನಿಮಗಾಗಿ ಸ್ಯಾಂಪಲ್. ಅಧಿಕಾರದಾಹಕ್ಕೆ ಸೂರತ್ ನ
ಪ್ರಜೆಗಳ ಓಟಿನ ಹಕ್ಕನ್ನೇ ಕಸಿದುಕೊಂಡ ಮೋದಿ (ಉಮೇದುವಾರನನ್ನಲ್ಲ, ನನ್ನ ಮುಖ ನೋಡಿ ಓಟು ಹಾಕಿ ಎಂದು ಕೇಳುವುದು ಇವರೇ ಅಲ್ಲವೇ?) ನಂತರ ಹಾಳೂರಿಗೆ ಉಳಿದವನೇ ಗೌಡ. ಒಂದು
ಸಂಪದ್ಭರಿತ ನಾಡನ್ನು ಇವರ ಅಧಿಕಾರ ದಾಹಕ್ಕೆ ಹಾಳೂರನ್ನಾಗಿ ಮಾಡುವ ಮಾಡೆಲ್ ನಿಮಗೆ ಕಾಣುವುದಿಲ್ಲವೇ? ಪ್ರಜಾಪ್ರಭುತ್ವದ ಅಂತ್ಯ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
10 ವರ್ಷ ಅಧಿಕಾರವಿದ್ದರೂ ಕೆಲಸ ಮಾಡದೇ ದೇಶದ ಸೊತ್ತನ್ನೆಲ್ಲಾ ಮಾರಿ ಭಾರತೀಯರ ಮೇಲೆ ಹೊರಲಾರದಷ್ಟು ಸಾಲ ಹೊರೆಸಿ, ದ್ವೇಷ ಹರಡಿ ದೇಶ ಹಾಳುಮಾಡಿದ್ದಕ್ಕೆ ಜನಮತ ಸಿಗದೇ ಹೋಗಿಬಿಟ್ಟರೆ
ಮಾನ ಮರ್ಯಾದೆ ಬಿಟ್ಟು ಎಲೆಕ್ಷನ್ (Election) ಇಲ್ಲದೆಯೇ ಅವರ ಗ್ಯಾಂಗಿನವರನ್ನು ಗೆಲಿಸುತ್ತಾರೆ .
ಇದು ನಮ್ಮ ಜಾದೂಗರ್ ಪ್ರಧಾನಿಯ ಮೋದಿ ಮ್ಯಾಜಿಕ್ (Modi Magic), ದ್ವೇಷ ಭಾಷಣಗಳಿಗೆ ಕಿವುಡಾದ, ವಿವಿಪ್ಯಾಟ್ ನ ಚೀಟಿಗಳನ್ನು ಎಣಿಸಲು ಯೋಗ್ಯತೆಯಿಲ್ಲದ ನಾಲಾಯಕ್ ಚುನಾವಣಾ
ಆಯೋಗ (Election Commission), ಅದನ್ನು ಪ್ರಶ್ನಿಸದ ಕೋರ್ಟಿನ ಭರವಸೆಯಲ್ಲಿ ನಾವು ಪ್ರಜಾಪ್ರಭುತ್ವ ಉಳಿಯುತ್ತೆ ಅಂತ ನಂಬಿಕೂತಿದ್ದೇವೆ.. ಇನ್ನು ಮೇಲೆ ಮೋದಿ ಆಡುವ ಜುಮ್ಲಾ ನಾಟಕದಂತೇ
ನಾವೂ ಕೂಡ ಓಟು ಹಾಕುವ ನಾಟಕವಷ್ಟೇ ಆಡಬೇಕು ಎಂದು ಟೀಕಿಸಿದ್ದಾರೆ.
ಇನ್ನೊಂದು ಪೋಸ್ಟ್ನಲ್ಲಿ, ಮೋದಿಯನ್ನು ಮತ್ತೆ ಕ್ರೆಡಿಟ್ಟು ಕಳ್ಳನಾಗಿಸಿದ ರಾಜ್ಯ ಬಿಜೆಪಿ (BJP). ಸುಪ್ರೀಂಕೋರ್ಟು ಉಗಿದ ಮೇಲೆ ಉದ್ದೇಶಪೂರ್ವಕವಾಗಿ ಹಿಡಿದಿಟ್ಟಿದ್ದ ಬರ ಪರಿಹಾರ ರಿಲೀಸ್ ಮಾಡಿ ಮಾನ
ಮರ್ಯಾದೆಯಿಲ್ಲದ ಬಿಜೆಪಿ ಗಳು ಮೋದಿಗೆ ಕಿರೆಡಿಟ್ಟು ಕೊಡೋದರಲ್ಲಿ ಬಿಸಿ ಆಗಿವೆ. ತಾವು ಅಧಿಕಾರದಲ್ಲಿಲ್ಲದ ರಾಜ್ಯಗಳಿಗೆ ಕೊಡಬಾರದ ತೊಂದರೆ ಕೊಟ್ಟು, ಕರ್ನಾಟಕಕ್ಕೆ ನ್ಯಾಯಯುತವಾಗಿ ಕೊಡಬೇಕಾದ
GST ಪಾಲು ಕೊಡದೆ, ಆರು ತಿಂಗಳ ಕೋರಿಕೆಯ ನಂತರವೂ ಬರ ಪರಿಹಾರ ಕೊಡದೆ, 28 ಅಯೋಗ್ಯ MP ಗಳೂ ರಾಜ್ಯದ ಪರವಾಗಿ ಮಾತಾಡದೆ ಮೋದಿಯ ಕಾಲು ನೆಕ್ಕುತ್ತಾ ನಮಗೇ 2 ನೇ ಕ್ಲಾಸಿನ
ಪಾಠ ಮಾಡುತ್ತಾ ಕಳ್ಳಾಟ ಆಡಿದ್ದು ಯಾರಿಗೂ ಗೊತ್ತಿಲ್ಲವೇನೊ ಅನ್ನುವಂತೆ ಏನೇ ಆಗಲಿ 56 ಇಂಚಿನ ಚರ್ಮವಲ್ಲವೇ? ಎಂದು ಲೇವಡಿ ಮಾಡಿದ್ದಾರೆ.
ಇದನ್ನು ಓದಿ: ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣ: ನಾವು ಸಂತ್ರಸ್ತ ಮಹಿಳೆಯರ ಪರವಾಗಿದ್ದೇವೆ, ಧೈರ್ಯವಾಗಿ ದೂರು ಕೊಡಿ-ಮಹಿಳಾ ಕಾಂಗ್ರೆಸ್