ಆದಿತ್ಯ ಆಳ್ವಾ ಜಾಮೀನು ಅರ್ಜಿಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ, ಡಿ. 17: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಬಾಲಿವುಡ್ ನಟ ವಿವೇಕ್ ಒಬೆರಾಯ್ ಪತ್ನಿಯ ಸೋದರ ಆದಿತ್ಯ ಆಳ್ವಾ ತನ್ನ ಬಂಧನಕ್ಕೆ ಮುನ್ನ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಆದಿತ್ಯಾ ಹುಡುಕಿಕೊಂಡು ಸಿಸಿಬಿ ತಂಡ ಮುಂಬೈನಲ್ಲಿರುವ ವಿವೇಕ್ ಒಬೆರಾಯ್ ನಿವಾಸಕ್ಕೆ ಹೋಗಿದ್ದಾಗ ,ಪೋಲೀಸರಿಂದ ತಪ್ಪಿಸಿಕೊಂಡು ಬಂಧನಕ್ಕೆ ಒಳಗಾಗದೆ ನೇರವಾಗಿ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದು ಇದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಇದರಿಂದ ನೇರವಾಗಿ ಸುಪ್ರೀಂ ಕೋರ್ಟ್ ಇಂತಹ ಪ್ರಕರಣಗಳಿಗೆ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಆದ ಕಾರಣ ಆದಿತ್ಯ ಆಳ್ವಾಗೆ ಈಗ ಪೋಲೀಸರ ಬಂಧನ ಭೀತಿ ಇನ್ನೂ ಹೆಚ್ಚಾಗಿದೆ ಎಂದೂ ಪೋಲೀಸರ ಮೂಲಗಳಿಂದ ತಿಳಿದಿದೆ.

Exit mobile version