ನಿಮ್ಮ ಪ್ರತಿಕ್ರಿಯೆಗಳು ನನ್ನನ್ನು ಆಳವಾಗಿ ಪ್ರಭಾವಿಸಿ ಕ್ಷಮೆಯಾಚಿಸುವಂತೆ ಮಾಡಿವೆ : ನಟ ಅಕ್ಷಯ್‍ಕುಮಾರ್!

actor


ಹಿಂದಿ ಚಿತ್ರರಂಗದ(Bollywood) ನಟ(Actor) ಅಕ್ಷಯ್ ಕುಮಾರ್(Akshay Kumar) ಸಾರ್ವಜನಿಕವಾಗಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಪಾನ್ ಮಸಾಲ(Pan Masala) ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅವರ ವಿರುದ್ದ ಟೀಕೆ ಕೇಳಿ ಬಂದಿತ್ತು.

ಈ ಹಿಂದೆ ಅವರು ‘ನಾನು ಎಂದಿಗೂ ತಂಬಾಕು ಸೇವನೆಯನ್ನು ಉತ್ತೇಜಿಸುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದ್ದ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿತ್ತು. ಹೀಗಾಗಿ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಈ ಕುರಿತು ಟ್ವೀಟ್(Tweet) ಮಾಡಿರುವ ಅಕ್ಷಯ್ ಕುಮಾರ್, “ನನ್ನನ್ನು ಕ್ಷಮಿಸಿ, ಕಳೆದ ಕೆಲವು ದಿನಗಳಿಂದ ನೀವು ನೀಡುತ್ತಿರುವ ಪ್ರತಿಕ್ರಿಯೆಗಳು ನನ್ನನ್ನು ಆಳವಾಗಿ ಪ್ರಭಾವಿಸಿವೆ. ನಾನು ಜಾಹೀರಾತು ಮಾಡುತ್ತಿರುವ ಬ್ರಾಂಡ್ ಬಗೆಗಿನ ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ.

ಇಂದಿನಿಂದ ನಾನು ತಂಬಾಕು ಸೇವನೆಯನ್ನು ಉತ್ತೇಜಿಸುವುದಿಲ್ಲ. ಈ ಜಾಹೀರಾತಿನಿಂದ ವಿನಯತೆಯಿಂದ ಹಿಂದೆ ಸರಿಯುತ್ತೇನೆ. ಈ ಜಾಹೀರಾತಿಗಾಗಿ ನಾನು ಪಡೆದಿರುವ ಎಲ್ಲ ಸಂಭಾವನೆಯನ್ನು ಯೋಗ್ಯ ಉದ್ದೇಶಕ್ಕಾಗಿ ನೀಡುತ್ತೇನೆ. ಆದರೆ ಕಾನೂನಿನ ಪ್ರಕಾರ ನಾನು ನಟಿಸಿರುವ ಜಾಹೀರಾತಿನ ಅವಧಿ ಮುಗಿಯುವವರೆಗೂ ಅದನ್ನು ಪ್ರಸಾರ ಮಾಡಲಾಗುವುದು. ಈ ಕ್ಷಣದಿಂದ ನಾನು ಭವಿಷ್ಯದ ಆಯ್ಕೆಗಳನ್ನು ಮಾಡಿಕೊಳ್ಳುವಾಗ ಹೆಚ್ಚು ಜಾಗ್ರತೆ ವಹಿಸುತ್ತೇನೆ ಎಂಬ ಭರವಸೆ ನೀಡುತ್ತೇನೆ. ಅದಕ್ಕೆ ಪ್ರತಿಯಾಗಿ ನಾನು ನಿಮ್ಮಿಂದ ಪ್ರೀತಿ ಮತ್ತು ಹಾರೈಕೆಯನ್ನು ಬಯಸುತ್ತೇನೆ.

ನನ್ನ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳೇ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದಿದ್ದಾರೆ. ಇನ್ನು ಈ ಹಿಂದೆ ಅಮಿತಾಬ್ ಬಚ್ಚನ್ ಕೂಡಾ ಪಾನ್ ಮಸಾಲ ಜಾಹೀರಾತಿನಲ್ಲಿ ಅಭಿನಯಿಸಿದ್ದರು. ತದನಂತರ ಸಾರ್ವಜನಿಕವಾಗಿ ಕ್ಷಮೆಯಾಚಿಸಿ, ಪಡೆದ ಎಲ್ಲ ಸಂಭಾವನೆಯನ್ನು ದಾನ ಮಾಡಿದ್ದರು. ಆದರೆ ಸದ್ಯ ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಪಾನ ಮಸಾಲ ಜಾಹೀರಾತಿಯನ್ನು ಕಾಣಿಸಿಕೊಳ್ಳುತ್ತಿದ್ದಾರೆ.

Exit mobile version