ಮತ್ತೋರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ

army

army

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‌ನಲ್ಲಿ ಮನ ಬಂದಂತೆ ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡು ಹಾರಿಸಿ ತೊಪ್ಪಿಸಿಕೊಳ್ಳಲು ಯತ್ನಿಸಿದ್ದ ಉಗ್ರನೋರ್ವನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಕವೂಸಾ ಖಾಲಿಸಾ ಎಂಬ ಪ್ರದೇಶದಲ್ಲಿ ಉಗ್ರನೋರ್ವ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಸೇನಾಪಡೆ ಉಗ್ರನ ಕುತ್ತಿಗೆಗೆ ಗುಂಡು ಹಾರಿಸಿ ಹತ್ಯೆ ಮಾಡಿತ್ತು. ಕಳೆದ ೧೦ ದಿನಗಳಲ್ಲಿ ಭದ್ರತಾ ಪಡೆಗಳು ಒಟ್ಟು ನಾಲ್ವರು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಹತ್ಯೆಯಾದ ಉಗ್ರರನ್ನು ಶಕೀಲ್ ಅಹ್ಮದ್ ವಾನಿ, ಶೋಕತ್ ಅಹ್ಮದ್, ಅಕಿಬ್ ಮಕ್ಬೂಲ್ ಖಾನ್, ಮತ್ತು ಅಜಾಜ್ ಅಹ್ಮದ್ ದಾರ್ ಎಂದು ಗುರ್ತಿಸಲಾಗಿದೆ.
ಗುರುವಾರದಂದು ಕುಪ್ವಾರದಲ್ಲಿ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಬಂಧನಕ್ಕೊಳ ಪಡಿಸಿತ್ತು. ಇಬ್ಬರೂ ಕಾರಿನಲ್ಲಿ ಚೆಕ್‌ಪೋಸ್ಟ್‌ ದಾಟಲು ಯತ್ನಿಸುತ್ತುದ್ದರು. ಬಂಧಿತರಿಂದ ಭದ್ರತಾ ಪಡೆಗಳು 1 ಎಕೆ 47, ಸ್ಫೋಟಕ ವಸ್ತುಗಳು, 2 ಗ್ರೆನೇಡ್ ಗಳು, 7 ಲಕ್ಷ ನಗದು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Exit mobile version